ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲಿ ನಡೆದಿದ್ದು ಸರ್ಕಾರಿ ಪ್ರಯೋಜಿತ ಗೋಲಿಬಾರ್: ಕಾಂಗ್ರೆಸ್​ ಆರೋಪ

ನಿನ್ನೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್​ ‘ಸರ್ಕಾರಿ ಪ್ರಯೋಜಿತ ಗೋಲಿಬಾರ್’ ಆಗಿದೆ. ಇದರ ಅವಶ್ಯಕತೆ ಇರಲಿಲ್ಲ ಎಂದು​ ವಿಧಾನ ಪರಿಷತ್​ ಸದಸ್ಯ ಹಾಗೂ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹರೀಶ್​ ಕುಮಾರ್​ ಆರೋಪಿಸಿದ್ದಾರೆ.

By

Published : Dec 20, 2019, 1:29 PM IST

ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ಸುದ್ದಿಗೋಷ್ಠಿ , Ramanath Rai Pressmeet in Mangalore
ಕಾಂಗ್ರೆಸ್​ ಆರೋಪ

ಮಂಗಳೂರು: ನಿನ್ನೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್​ ‘ಸರ್ಕಾರಿ ಪ್ರಯೋಜಿತ ಗೋಲಿಬಾರ್’ ಆಗಿದೆ. ಇದರ ಅವಶ್ಯಕತೆ ಇರಲಿಲ್ಲ ಎಂದು​ ವಿಧಾನ ಪರಿಷತ್​ ಸದಸ್ಯ ಹಾಗೂ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹರೀಶ್​ ಕುಮಾರ್​ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 700 ರಷ್ಟು ಪ್ರತಿಭಟನಾಕಾರರು ಇದ್ದರು. ಇಲ್ಲಿ ಗುಂಪು ಚದುರಿಸಲು ಗೋಲಿಬಾರ್​ ನಡೆಸುವ ಅವಶ್ಯಕತೆ ಇರಲಿಲ್ಲ. ಬೇರೆ ಕಡೆ ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಇದ್ದರೂ ಇಂತಹ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಪೊಲೀಸ್​ ಇಲಾಖೆ 144 ಸೆಕ್ಷನ್​ ಹಾಕಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸಾಧಾರಣವಾಗಿ ಯಾವುದಾದರು ಅಹಿತಕರ ಘಟನೆ ನಡೆದ ಬಳಿಕ 144 ಸೆಕ್ಷನ್​ ಹಾಕಲಾಗುತ್ತದೆ. ಆದರೆ ಮಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವ ಮೊದಲೇ 144 ಸೆಕ್ಷನ್​ ಹಾಕಿ ಪ್ರತಿಭಟನಾಕಾರರನ್ನು ಹತ್ತಿಕ್ಕಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ABOUT THE AUTHOR

...view details