ಕರ್ನಾಟಕ

karnataka

By

Published : Sep 1, 2020, 2:21 PM IST

ETV Bharat / state

ಆಹಾರ ಅರಸಿ ಬಂದ ಆನೆ ವಿದ್ಯುತ್​ ಸ್ಪರ್ಶಿಸಿ ಸಾವು

ಆಹಾರ ಅರಸಿ ಬಂದ ಅಂದಾಜು 35ರಿಂದ 40 ವರ್ಷದ ಗಂಡು ಕಾಡಾನೆ ವಿದ್ಯುತ್​ ಸ್ಪರ್ಶಿಸಿ ಸಾವನ್ನಪ್ಪಿದೆ.

ಆಹಾರ ಅರಸಿ ಬಂದ ಆನೆ ವಿದ್ಯುತ್​ ಸ್ಪರ್ಶಿಸಿ ಸಾವು
ಆಹಾರ ಅರಸಿ ಬಂದ ಆನೆ ವಿದ್ಯುತ್​ ಸ್ಪರ್ಶಿಸಿ ಸಾವು

ಕಡಬ:ತಾಲೂಕಿನ ಕೊಂಬಾರು ಗ್ರಾಮದ ಬಿಳಿನೆಲೆ ಸಮೀಪದ ಪುತ್ತಿಲದಲ್ಲಿ ವಿದ್ಯುತ್ ಲೈನ್ ಸ್ಪರ್ಶಗೊಂಡು ಕಾಡಾನೆ ಮೃತಪಟ್ಟ ಘಟನೆ ನಡೆದಿದೆ.

ಆಹಾರ ಅರಸಿ ಬಂದ ಅಂದಾಜು 35ರಿಂದ 40 ವರ್ಷದ ಗಂಡು ಕಾಡಾನೆ ಸ್ಥಳದಲ್ಲಿದ್ದ ಬೈನೆ ಮರವನ್ನು ತಿನ್ನಲು ಯತ್ನಿಸಿದ್ದು, ಈ ಸಮಯದಲ್ಲಿ ಬೈನೆ ಮರ ವಿದ್ಯುತ್ ಲೈನ್​​ಗೆ ತಾಗಿ ವಿದ್ಯುತ್ ಸ್ಪರ್ಶಿಸಿ ಆನೆ ಅಸುನೀಗಿದೆ ಎನ್ನಲಾಗಿದೆ. ಸ್ಥಳಕ್ಕೆ ವಲಯ ಅರಣ್ಯಧಿಕಾರಿ ರಾಘವೇಂದ್ರ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಮೆಸ್ಕಾಂ ಇಲಾಖೆಯ ಅಧಿಕಾರಿಗಳು, ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಹಾರ ಅರಸಿ ಬಂದ ಆನೆ ವಿದ್ಯುತ್​ ಸ್ಪರ್ಶಿಸಿ ಸಾವು

ಇಂದು ನಸುಕಿನ ಜಾವ ಈ ಘಟನೆ ನಡೆದಿರಬಹುದು ಎನ್ನಲಾಗಿದ್ದು, ಕಾಡಾನೆ ಮೃತಪಟ್ಟ ವಿಷಯ ತಿಳಿದು ಆನೆಯನ್ನು ನೋಡಲು ನೂರಾರು ಜನರು ಸ್ಥಳದಲ್ಲಿ ನೆರೆದಿದ್ದರು. ಅರಣ್ಯ ಇಲಾಖೆ ಕೂಡಲೇ ಅರಣ್ಯಗಳ ಬದಿಯಲ್ಲಿ ಕಂದಕಗಳನ್ನು ನಿರ್ಮಿಸಿ ಕಾಡು ಪ್ರಾಣಿಗಳನ್ನು ಹಾಗೂ ಸ್ಥಳೀಯರ ಕೃಷಿ ಹಾಗೂ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details