ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ಮಳೆ... ಭಾರೀ ಗಾಳಿಗೆ ಧರೆಗುರುಳಿದ ಬೃಹತ್​​​ ಆಲದ ಮರ

ಬೇಸಿಗೆಯ ಬಿಸಿಲಿಗೆ ಕಾದಿದ್ದ ಧರೆಗೆ ನಿನ್ನೆ ಸಂಜೆ ಮಳೆರಾಯ ತಂಪೆರೆದಿದ್ದಾನೆ. ಅದರ ಜೊತೆಗೆ ಅನಾಹುತಗಳನ್ನೂ ತಂದಿಟ್ಟಿದ್ದಾನೆ. ಮಂಗಳೂರು ನಗರದಲ್ಲಿ ಸುರಿದ ಗಾಳಿ ಮಳೆಗೆ ಬೃಹತ್​ ಮರವೊಂದು ಧರೆಗುರುಳಿದೆ.

By

Published : Apr 3, 2019, 10:12 AM IST

ಧರೆಗುರುಳಿದ ಮರ

ಮಂಗಳೂರು: ಬೇಸಿಗೆ ಬೇಗೆಗೆ ಬೆಂದಿದ್ದ ಧರೆಗೆ ಮಳೆರಾಯ ನಿನ್ನೆ ತಂಪೆರೆದಿದ್ದಾನೆ. ನಗರದಲ್ಲಿ ನಿನ್ನೆ ಸಂಜೆ ಮಳೆ ಸುರಿದಿದೆ. ಭಾರೀ ಗಾಳಿ ಮಳೆ ಸುರಿದ ಪರಿಣಾಮ ಆಲದ ಮರವೊಂದು ಧರೆಗುರುಳಿದೆ.

ಮಂಗಳೂರಲ್ಲಿ ಮಳೆ

ಮಂಗಳೂರು ನಗರದ ಬಿಜೈನ ನಾಗಬನದ ಬಳಿಯಲ್ಲಿರುವ ಈ ಮರ ಸಂಜೆ ಸುರಿದ ಗಾಳಿ ಮಳೆಗೆ ಧರೆಗುರುಳಿದ್ದು, ಮನೆಯೊಂದಕ್ಕೆ ತಾಗಿ‌ದೆ. ಆದರೆ ಮರ ಬಿದ್ದಿತಾದರೂ ಮನೆಗೆ ಹಾನಿಯಾಗಿಲ್ಲ. ಇನ್ನು ಮರ ವಿದ್ಯುತ್ ಕಂಬದ ಮೇಲೆಯೂ ಬಿದ್ದ ಪರಿಣಾಮ ಆ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ABOUT THE AUTHOR

...view details