ಕರ್ನಾಟಕ

karnataka

By

Published : Jul 22, 2020, 8:59 PM IST

ETV Bharat / state

ದ.ಕ ಜಿಲ್ಲೆಯಲ್ಲಿ ಕೊರೊನಾಗೆ ಐವರ ಬಲಿ ; 162 ಮಂದಿಗೆ ಸೋಂಕು ದೃಢ

ಇಂದು 162 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 13 ಮಂದಿ ಪ್ರಾಥಮಿಕ ಸಂಪರ್ಕ, 70 ಐಎಲ್ಐ ಪ್ರಕರಣ, 18 SARI ಪ್ರಕರಣ, 1 ಪ್ರಕರಣ ವಿದೇಶದಿಂದ ಬಂದವರಾಗಿದ್ದಾರೆ. ಇನ್ನೂ 60 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ..

Mangalore corona case
Mangalore corona case

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು ಐವರು ಸಾವನ್ನಪ್ಪಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಮಂದಿ, ದಾವಣಗೆರೆ ಜಿಲ್ಲೆಯ ಓರ್ವರು ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆಯ 54 ವರ್ಷದ ವ್ಯಕ್ತಿ, ಮಂಗಳೂರಿನ 60 ವರ್ಷದ ವೃದ್ಧ, ಪುತ್ತೂರಿನ 70 ವರ್ಷದ ವೃದ್ಧೆ, ಮಂಗಳೂರಿನ 75 ವರ್ಷದ ವೃದ್ಧೆ, ಮಂಗಳೂರಿನ 66 ವರ್ಷದ ವೃದ್ಧೆ ಮೃತಪಟ್ಟಿದ್ದು ಮೃತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 162 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 13 ಮಂದಿ ಪ್ರಾಥಮಿಕ ಸಂಪರ್ಕ, 70 ಐಎಲ್ಐ ಪ್ರಕರಣ, 18 SARI ಪ್ರಕರಣ, 1 ಪ್ರಕರಣ ವಿದೇಶದಿಂದ ಬಂದವರಾಗಿದ್ದಾರೆ. ಇನ್ನೂ 60 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಈವರೆಗೆ ಕೊರೊನಾ ದೃಢಪಟ್ಟವರ ಸಂಖ್ಯೆ 3,996ಕ್ಕೆ ಏರಿಕೆಯಾಗಿದೆ. ಇಂದು 69 ಮಂದಿ ಗುಣಮುಖರಾಗಿದ್ದು, ಈವರೆಗೆ 1744 ಮಂದಿ ಗುಣಮುಖರಾಗಿ ಮನೆ‌ ಸೇರಿದ್ದಾರೆ. ಸದ್ಯ 2160 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details