ಕರ್ನಾಟಕ

karnataka

ಮಂಗಳೂರು ಕಡಲತೀರದಲ್ಲಿ ಬೋಟ್​ಗೆ ಹಡಗು ಡಿಕ್ಕಿ : ಮೂವರು ಮೀನುಗಾರರು ಸಾವು, 9 ಮಂದಿ ಕಣ್ಮರೆ

By

Published : Apr 13, 2021, 12:50 PM IST

Updated : Apr 13, 2021, 7:45 PM IST

ಮಂಗಳೂರಿನ ಕಡಲತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ದುರಂತಕ್ಕೀಡಾಗಿದ್ದು, ಮೂವರು ಮೀನುಗಾರರು ಸಾವನ್ನಪ್ಪಿದ್ದಾರೆ. 9 ಮಂದಿ ಕಣ್ಮರೆಯಾಗಿದ್ದರೆ.

12 fishrmen missing in manglore sea
ಮಂಗಳೂರು ಕಡಲತೀರದಲ್ಲಿ ಬೋಟ್ ದುರಂತ

ಮಂಗಳೂರು:ಇಲ್ಲಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್​ಗೆ ಸರಕು ಸಾಗಣೆಯ ಹಡಗು ಡಿಕ್ಕಿ ಹೊಡೆದ ಪರಿಣಾಮ​ ದುರಂತಕ್ಕೀಡಾಗಿದ್ದು, ಮೂವರು ಮೀನುಗಾರರು ಸಾವಿಗೀಡಾದರೆ, ಈವರೆಗೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಇನ್ನು ಕಣ್ಮರೆಯಾಗಿರುವ 9 ಮೀನುಗಾರರಿಗಾಗಿ ಸಮುದ್ರದಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಕೇರಳದಿಂದ ಮೀನುಗಾರಿಕೆ ನಡೆಸುತ್ತಾ ಬಂದ ಮೀನುಗಾರಿಕಾ ಬೋಟ್ ಮಂಗಳೂರು ಸಮೀಪ ದುರಂತಕ್ಕೀಡಾಗಿದೆ. ನವ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದ್ದು ಇದರಲ್ಲಿ 14 ಮೀನುಗಾರರು ಇದ್ದರು.

ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗು ಮತ್ತು ಏರ್​ಕ್ರಾಪ್ಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ. 14 ಜನರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಶೋಧದ ವೇಳೆ ಮೂವರ ಮೃತದೇಹಗಳು ಸಿಕ್ಕಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. 9 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Last Updated : Apr 13, 2021, 7:45 PM IST

ABOUT THE AUTHOR

...view details