ಕರ್ನಾಟಕ

karnataka

By

Published : May 27, 2020, 11:10 PM IST

ETV Bharat / state

ಅಕ್ರಮ ಮರಳುಗಾರಿಕೆಯಿಂದಾದ ನದಿ ಗುಂಡಿಯಲ್ಲಿ ಬಿದ್ದು ಯುವತಿ ಸಾವು

ವೇದಾವತಿ ನದಿ ವೀಕ್ಷಣೆಗೆ ಬಂದಿದ್ದ ಯುವತಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ. ಮೃತಳನ್ನು ತಾಲೂಕಿನ ಕೇಣುಕಾಪುರ ಗ್ರಾಮದ ಸುಜಾತಾ (22) ಎಂದು ಗುರುತಿಸಲಾಗಿದೆ.

Woman dies In Vedavathi river at Chitradhurga
ವೇದಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಯುವತಿ ಸಾವು

ಚಿತ್ರದುರ್ಗ:ವೇದಾವತಿ ನದಿ ವೀಕ್ಷಣೆಗೆ ಬಂದಿದ್ದ ಯುವತಿ ಕಾಲು ಜಾರಿ ನೀರಿಗೆ ಬಿದ್ದು ಮೃತ ಪಟ್ಟಿರುವ ಘಟನೆ ಚಳ್ಳಕೆರೆ ತಾಲೂಕಿನ ತಳಕು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಳನ್ನು ತಾಲೂಕಿನ ಕೇಣುಕಾಪುರ ಗ್ರಾಮದ ಸುಜಾತಾ (22) ಎಂದು ಗುರುತಿಸಲಾಗಿದೆ. ನದಿ ನೀರಿನ ವೀಕ್ಷಣೆಗೆ ಬಂದಿದ್ದ ಸುಜಾತಾ, ಆಳವಾದ ಮರಳು ಗುಂಡಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ.

ಸುಜಾತಾಳ ಸಾವಿಗೆ ಅಕ್ರಮ ಮರಳು ಸಾಗಣೆದಾರರು ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.‌ ಮೃತ ಯುವತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯಾಗಿದ್ದರು.

ABOUT THE AUTHOR

...view details