ಚಿತ್ರದುರ್ಗ:ಅಲೆಮಾರಿ ಜನಾಂಗಕ್ಕೆ ಮನೆ ಹಂಚಿಕೆಯ ಪಟ್ಟಿ ಸಿದ್ಧಪಡಿಸದ ಪಿಡಿಒಗಳನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಜನಾಂಗಕ್ಕೆ ವಸತಿ ಯೋಜನೆಗಳ ಮನೆ ಹಂಚಿಕೆಯ ಕುರಿತು ಸಭೆ ನಡೆಸಿದರು. ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಪಿಡಿಒಗಳ ಸಭೆಯಲ್ಲಿ ಭಾಗಿಯಾಗಿದ್ದರು. ಮನೆ ಹಂಚಿಕೆ ಕುರಿತು ಪಟ್ಟಿ ಸಿದ್ಧಪಡಿಸದ ಪಿಡಿಒಗಳ ವಿರುದ್ಧ ಶಾಸಕಿ ಪೂರ್ಣಿಮಾ ಗರಂ ಆದರು.