ಕರ್ನಾಟಕ

karnataka

By

Published : Feb 27, 2021, 5:26 PM IST

ETV Bharat / state

ಚಿತ್ರದುರ್ಗ; ವಸತಿ ಯೋಜನೆ ಮನೆ ಹಂಚಿಕೆ ಪಟ್ಟಿ ಸಿದ್ಧಪಡಿಸಲು ಸೂಚನೆ

ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಸಭೆಯಲ್ಲಿ ಭಾಗಿಯಾಗಿದ್ದರು. ಮನೆ ಹಂಚಿಕೆ ಕುರಿತು ಪಟ್ಟಿ ಸಿದ್ಧಪಡಿಸದ ಪಿಡಿಒಗಳ ವಿರುದ್ಧ ಶಾಸಕಿ ಪೂರ್ಣಿಮಾ ಗರಂ ಆದರು.

ವಸತಿ ಯೋಜನೆಗಳ ಮನೆ ಹಂಚಿಕೆಯ ಕುರಿತು ಸಭೆ
ವಸತಿ ಯೋಜನೆಗಳ ಮನೆ ಹಂಚಿಕೆಯ ಕುರಿತು ಸಭೆ

ಚಿತ್ರದುರ್ಗ:ಅಲೆಮಾರಿ ಜನಾಂಗಕ್ಕೆ ಮನೆ ಹಂಚಿಕೆಯ ಪಟ್ಟಿ ಸಿದ್ಧಪಡಿಸದ ಪಿಡಿಒಗಳನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತರಾಟೆಗೆ ತೆಗೆದುಕೊಂಡಿದ್ದಾರೆ.

ವಸತಿ ಯೋಜನೆಗಳ ಮನೆ ಹಂಚಿಕೆಯ ಕುರಿತು ಸಭೆ

ಇಂದು ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಜನಾಂಗಕ್ಕೆ ವಸತಿ ಯೋಜನೆಗಳ ಮನೆ ಹಂಚಿಕೆಯ ಕುರಿತು ಸಭೆ ನಡೆಸಿದರು‌. ತಾಲೂಕಿನ 33 ಗ್ರಾಮ ಪಂಚಾಯಿತಿಗಳ ಪಿಡಿಒಗಳ ಸಭೆಯಲ್ಲಿ ಭಾಗಿಯಾಗಿದ್ದರು. ಮನೆ ಹಂಚಿಕೆ ಕುರಿತು ಪಟ್ಟಿ ಸಿದ್ಧಪಡಿಸದ ಪಿಡಿಒಗಳ ವಿರುದ್ಧ ಶಾಸಕಿ ಪೂರ್ಣಿಮಾ ಗರಂ ಆದರು.

ಬಹುವರ್ಷಗಳಿಂದ ಅಲೆಮಾರಿ ಜನಾಂಗಕ್ಕೆ ವಸತಿ ಯೋಜನೆಯಲ್ಲಿ ಮನೆ ಸಿಗದೆ ಪರದಾಟ ನಡೆಸುವಂತಾಗಿದೆ. ಸರ್ಕಾರದಿಂದ ವಸತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಭೆಯಲ್ಲಿ ಸಿಡಿಮಿಡಿಗೊಂಡರು.

ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಡಾ‌.ಕೆ. ನಂದಿನಿ ಅಧಿಕಾರಿಗಳು ತಕ್ಷಣವೇ ವರದಿ ನೀಡುವಂತೆ ಸೂಚಿಸಿದರು.

For All Latest Updates

TAGGED:

ABOUT THE AUTHOR

...view details