ಕರ್ನಾಟಕ

karnataka

By

Published : Apr 23, 2020, 5:19 PM IST

ETV Bharat / state

ಚಿತ್ರದುರ್ಗದಲ್ಲಿ ಸಂಸದರಿಂದ ಊಟದ ವ್ಯವಸ್ಥೆ: ತುತ್ತು ಅನ್ನಕ್ಕಾಗಿ ಕಾದು ಕುಳಿತ ಜನ

ಕೊರೊನಾ ಸೋಂಕು ತಡೆಗೆ ಲಾಕ್​ಡೌನ್ ಇರುವುದರಿಂದ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಬಡ ಜನರಿಗಾಗಿ ಊಟದ ವ್ಯವಸ್ಥೆ ಮಾಡಿದ್ದರು. ಆದರೆ ಸ್ಥಳಕ್ಕೆ ಸಚಿವ ರಮೇಶ್​ ಜಾರಕಿಹೊಳಿ ಅವರು ಬರಬೇಕಿದ್ದ ಊಟದ ಸಮಯವನ್ನು ಬದಲಿಸಲಾಗಿತ್ತು. ಹೀಗಾಗಿ ಬಡ ಜನರು ಊಟಕ್ಕಾಗಿ ಕಾದು ನಿಂತಿದ್ದ ದೃಧ್ಯ ಕಂಡುಬಂತು.

eddd
ಲಾಕ್​ಡೌನ್​ ಹಿನ್ನೆಲೆ ಚಿತ್ರದುರ್ಗದಲ್ಲಿ ಸಂಸದರಿಂದ ಊಟದ ವ್ಯವಸ್ಥೆ

ಚಿತ್ರದುರ್ಗ: ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್​ಡೌನ್ ಹಿನ್ನೆಲೆ ಸಂಸದ ಎ. ನಾರಾಯಣಸ್ವಾಮಿ ಬಡ ಜನರಿಗಾಗಿ ಊಟದ ವ್ಯವಸ್ಥೆ ಮಾಡಿದ್ದರು. ಊಟದ ಸಮಯ ಬದಲಿಸಿದ ಕಾರಣ ತುತ್ತು ಅನ್ನಕ್ಕಾಗಿ ಬಡವರು ಕಾದು ಕಾದು ಸುಸ್ತಾದ್ರು.

ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಸಂಸದ ನಾರಾಯಣಸ್ವಾಮಿ ಉಚಿತ ಭೋಜನ ವ್ಯವಸ್ಥೆ ಮಾಡಿದ್ದರು. ಊಟದ ವ್ಯವಸ್ಥೆ ಮಾಡಿದ ಸ್ಥಳಕ್ಕೆ ಸಚಿವ ರಮೇಶ್ ಜಾರಕಿಹೊಳಿ ಬರಬೇಕಿತ್ತು. ಇದರಿಂದ ಬಿಜೆಪಿ ಕಾರ್ಯಕರ್ತರು ಊಟದ ಸಮಯ ಬದಲಿಸಿದ್ದಕ್ಕೆ ಬಡವರ್ಗದ ಜನ ಊಟಕ್ಕಾಗಿ ಕಾಯುತ್ತ ನಿಂತಿದ್ದರು.

ಲಾಕ್​ಡೌನ್​ ಹಿನ್ನೆಲೆ ಚಿತ್ರದುರ್ಗದಲ್ಲಿ ಸಂಸದರಿಂದ ಊಟದ ವ್ಯವಸ್ಥೆ... ಸಮಯ ಬದಲಿಸಿದ್ದಕ್ಕೆ ಕಾದು ಸುಸ್ತಾನ ಜನ

ಪ್ರತಿನಿತ್ಯ ಮಧ್ಯಾಹ್ನ 12.30ಕ್ಕೆ ವಿತರಿಸುತ್ತಿದ್ದ ಊಟವನ್ನು ಮಧ್ಯಾಹ್ನ 2.30 ಕ್ಕೆ ವಿತರಿಸಿದ್ದರಿಂದ ನಿರ್ಗತಿಕರು ಹಾಗೂ ಬಡವರು ಊಟಕ್ಕಾಗಿ ಕಾದು ಕಾದು ಸುಸ್ತಾದ ದೃಶ್ಯ ಕಂಡು ಬಂತು.

ABOUT THE AUTHOR

...view details