ಕರ್ನಾಟಕ

karnataka

By

Published : Nov 3, 2019, 8:48 PM IST

ETV Bharat / state

ಕಾಂಗ್ರೆಸ್​ ನಾಯಕರು ಆಡಿಯೋ ತಿರುಚಿದ್ದಾರೆ : ಸಚಿವ ಸೋಮಣ್ಣ

ಅನರ್ಹರ ಬಗ್ಗೆ ಬಿಎಸ್​ವೈ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ನಾನು ಕೇಳಿದ್ದೇನೆ, ಅದರಲ್ಲಿ ಅಂತದ್ದು ಏನಿದೆ. ಆಡಿಯೋವನ್ನು ಕಾಂಗ್ರೆಸ್​ ನಾಯಕರು ತಿರುಚಿದ್ದಾರೆ ಎಂದು ಸಚಿವ ಸೋಮಣ್ಣ ಆರೋಪ ಮಾಡಿದ್ದಾರೆ.

ಸಚಿವ ವಿ.ಸೋಮಣ್ಣ

ಚಿತ್ರದುರ್ಗ: ಅನರ್ಹರ ಬಗ್ಗೆ ಬಿಎಸ್​ವೈ ಎನು ಮಾತನಾಡಿದ್ದಾರೆ, ಆಡಿಯೋದಲ್ಲಿ ಅಂತಹದ್ದೇನಿದೆ, ನಾನೂ ಕೇಳಿದ್ದೇನೆ ಕಾಂಗ್ರೆಸ್‌ ನಾಯಕರು ಆಡಿಯೋ ತಿರುಚಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಸುಪ್ರೀಂಕೋರ್ಟ್​ನಲ್ಲಿ ಬಿಎಸ್​ವೈ ಆಡಿಯೋ ವಿಚಾರವಾಗಿ ಕಾಂಗ್ರೆಸ್ ಪ್ರಸ್ತಾಪ ಮಾಡಲಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನಾಯಕರಿಗೆ ಮಾಡೋದಕ್ಕೆ ಏನೂ ಕೆಲಸ ಇಲ್ಲ, ಮೊದಲು ಅವರು ಏನು ಮಾಡಿದ್ದಾರೆ ಅನ್ನೋದು ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ವಿ.ಸೋಮಣ್ಣ

ಸಿದ್ದರಾಮಯ್ಯಗಿಂತ ಕುಮಾರಸ್ವಾಮಿಯೇ ಮೇಲು, ಸಿದ್ದರಾಮಯ್ಯರಿಗಿಂತ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ನಾಲ್ಕೈದು ಊರಿಗೆ ಓಡಾಡಿ ಜನರ ಸಮಸ್ಯೆ ಆಲಿಸಿದ್ದಾರೆ, ಅದ್ರೇ ಸಿದ್ದರಾಮಯ್ಯ ಏನ್ ಮಾಡಿದ್ದಾರೆ. ಸಿದ್ದರಾಮಯ್ಯಗೆ ಭಾಷೆ ಮೇಲೆ ಹಿಡಿತ ಇಲ್ಲ, ಅವರಪ್ಪ, ಇವರಪ್ಪ ಅಂತ ಮಾತಾಡ್ತಾರೆ, ಅದೇ ವಾಪಸ್ ಯಾರಾದರೂ ಸಿದ್ದರಾಮಯ್ಯಗೆ ಅದೇ ಭಾಷೆ ಬಳಸಿದ್ರೆ ಕಥೆ ಏನು ಎಂದು ಸಿದ್ದು ವಿರುದ್ದ ಗರಂ ಆದರು.

For All Latest Updates

ABOUT THE AUTHOR

...view details