ಕರ್ನಾಟಕ

karnataka

By

Published : Aug 1, 2019, 9:55 AM IST

ETV Bharat / state

ಅಪ್ಪಾ... ನಿನ್ನ ಬಿಟ್ಟು ನಾ ಹೇಗೆ ಹೋಗಲಿ? ತಂದೆಯನ್ನ ಕೊನೆಯ ಬಾರಿ ಭೇಟಿ ಮಾಡಿದ್ದ ಸಿದ್ದಾರ್ಥ್

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿರಿಯ ಕಾಫಿ ಉದ್ಯಮಿ ವಿ ಜಿ ಸಿದ್ದಾರ್ಥ್, ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಂದೆಯನ್ನು ಕೊನೆಯ ಬಾರಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು.

ಸಿದ್ದಾರ್ಥ್ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಪಕ್ಕ ಕುಳಿತಿರುವ ಫೋಟೋ

ಚಿಕ್ಕಮಗಳೂರು:ಚಿಕ್ಕಮಗಳೂರಿನ ಕಾಫೀಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ದ ಜಿಲ್ಲೆಯ ಹಿರಿಯ ಕಾಫಿ ಉದ್ಯಮಿ ವಿ ಜಿ ಸಿದ್ದಾರ್ಥ್ಈಗ ನೆನಪು ಮಾತ್ರ. ಆದರೆ ಅವರು ತಮ್ಮ ತಂದೆಯನ್ನು ಕೊನೆಯ ಬಾರಿ ಭೇಟಿ ಮಾಡಿದ್ದ ಫೋಟೋ ಸಿಕ್ಕಿದ್ದು, ಮನಕಲಕುವಂತಿದೆ.

ಸಿದ್ದಾರ್ಥ್ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಪಕ್ಕ ಕುಳಿತಿರುವ ಫೋಟೋ

ಸಿದ್ದಾರ್ಥ್​ರ ತಂದೆ ಗಂಗಯ್ಯ ಹೆಗ್ಡೆ, ಅನಾರೋಗ್ಯದಿಂದ ಬಳಲುತ್ತಿದ್ದು ಮೈಸೂರಿನ ನಜರ್​​ ಬಾದ್​​ನಲ್ಲಿರುವ ಗೋಪಾಲ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿದ್ದಾರ್ಥ್, ಮಂಗಳೂರು ಹೋಗುವುದಕ್ಕೂ ಮುನ್ನ ಅವರ ತಂದೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದರು. ಅವರು ತಂದೆಯ ಪಕ್ಕ ಕುಳಿತಿರುವ ಫೋಟೋ ಕಣ್ಣಲ್ಲಿ ನೀರು ತರಿಸದೇ ಇರದು.

ಈ ಫೋಟೋವನ್ನ ನೋಡಿದರೆ ಅಪ್ಪಾ... ನಿನ್ನ ಬಿಟ್ಟು ನಾ ಹೇಗೆ ಹೋಗಲಿ ಎಂಬ ಯೋಚನೆಯಲ್ಲಿ ಸಿದ್ದಾರ್ಥ್​ ತೊಡಗಿದ್ದಾರೆ ಎಂದು ಅನಿಸದೇ ಇರದು.

ABOUT THE AUTHOR

...view details