ಕರ್ನಾಟಕ

karnataka

By

Published : Apr 9, 2019, 2:57 PM IST

ETV Bharat / state

ಕಾಂಗ್ರೆಸ್ - ಜೆಡಿಎಸ್ ಕಾರ್ಯಕರ್ತರ ನಡುವೆ ಯಾವುದೇ ಗೊಂದಲವಿಲ್ಲ: ಪ್ರಜ್ವಲ್ ರೇವಣ್ಣ

ಹಾಸನ ಲೋಕಸಭೆಯ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಕಡೂರು ತಾಲೂಕಿನಲ್ಲಿ ಮತಯಾಚನೆ ನಡೆಸಿದರು. ಈ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಗೊಂದಲವಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಕಡೂರು ತಾಲೂಕಿನಲ್ಲಿ ಮತಯಾಚನೆ ನಡೆಸಿದರು

ಚಿಕ್ಕಮಗಳೂರು: ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಕಡೂರು ತಾಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಕಡೂರು ತಾಲೂಕಿನಲ್ಲಿ ಮತಯಾಚನೆ ನಡೆಸಿದರು

ಕಡೂರು ತಾಲೂಕಿನ ಹುಲ್ಲೆ ಹಳ್ಳಿ, ಜೋಡಿ ತಿಮ್ಮಪುರ, ಹಿರೇನಲ್ಲೂರ್, ಅಂತರ್ಗಟ್ಟೆ ಸೇರಿದಂತೆ ಹಲವರು ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಕಡೂರು ಬರಪೀಡಿತ ತಾಲೂಕು ಆಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆಯಬೇಕಿದೆ.ನೀವೆಲ್ಲ ಆಶೀರ್ವಾದ ಮಾಡಿದರೆನಾನು ಅಭಿರುದ್ಧಿ ಕೆಲಸ ಮಾಡುತ್ತೇನೆ ಎಂದು ಮತದಾರರಿಗೆ ಮನವಿ ಮಾಡಿದರು.

ಕಾಂಗ್ರೆಸ್ ಮತ್ತು ಜೆಡಿಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ ನಾನು ಮಾಧ್ಯಮದಲ್ಲಿ ನೋಡಿದ ಹಾಗೆ ಶಾಸಕ ಪ್ರೀತಂ ಗೌಡ, ಎ ಮಂಜು ಸೋಲುತ್ತಾರೆ ಎಂಬ ಆಡಿಯೋ ಇದೆ ಅನ್ನುವ ಕುರಿತು ಅವರಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂಬುದರ ಬಗ್ಗೆ ಶಾಸಕ ಪ್ರೀತಂ ಅವರಿಗೆ ಮಾಧ್ಯಮದವರೇ ಕೇಳಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ರು.

For All Latest Updates

TAGGED:

ABOUT THE AUTHOR

...view details