ಕರ್ನಾಟಕ

karnataka

By

Published : Jul 29, 2019, 6:39 PM IST

ETV Bharat / state

ಎರಡು ಕಾರುಗಳ ಮುಖಾಮುಖಿ ಡಿಕ್ಕಿ; ಅಪಾಯ ತಡೆದ ಏರ್​ಬ್ಯಾಗ್​

ಚಿಕ್ಕಮಗಳೂರು ತಾಲೂಕಿನ ಸಂತವೇರಿ ಘಾಟಿಯ ಸಮೀಪ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಕಾರಿನ ಏರ್​ಬ್ಯಾಗ್​ ಹೆಚ್ಚಿನ ಅಪಾಯವನ್ನು ತಪ್ಪಿಸಿದೆ.

ಎರಡು ಕಾರುಗಳ ಮುಖಾಮುಖಿ ಡಿಕ್ಕಿ

ಚಿಕ್ಕಮಗಳೂರು:ಚಿಕ್ಕಮಗಳೂರಿನಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಜೀವರಕ್ಷಕ ಏರ್ ಬ್ಯಾಗ್​ ಯಾವುದೇ ಪ್ರಾಣಾಪಾಯ ಆಗದಂತೆ ತಡೆದಿದೆ.

ಅಪಾಯ ತಡೆದ ಕಾರಿನ ಏರ್​ಬ್ಯಾಗ್​

ಚಿಕ್ಕಮಗಳೂರು ತಾಲೂಕಿನ ಸಂತವೇರಿ ಘಾಟಿಯ ತಿರುವು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಅಪಘಾತವಾದ ವೇಳೆ ಕಾರಿನ ಏರ್​ಬ್ಯಾಗ್​ ತಕ್ಷಣ ಹೊರ ಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕಾರು ಮತ್ತು ಚಿತ್ರದುರ್ಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ಎಂದು ಬರುತ್ತಿದ್ದ ಕಾರಿನ ನಡುವೆ ಅಪಘಾತವಾಗಿದೆ ಎಂದು ಗೊತ್ತಾಗಿದೆ. ಈ ಘಟನೆಯಿಂದ ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಟ್ಟರೇ, ಹೆಚ್ಚಿನ ಅಪಾಯವೇನೂ ಆಗಿಲ್ಲ.

ಡಿಕ್ಕಿಯಾದ ರಭಸಕ್ಕೆ ಎರಡೂ ಕಾರುಗಳು ನಜ್ಜು ಗುಜ್ಜಾಗಿವೆ. ಒಂದು ವೇಳೆ ಕಾರಿನ ಏರ್​ಬ್ಯಾಗ್​ ತೆರೆದುಕೊಳ್ಳದಿದ್ದರೇ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ಗಾಯಾಳುಗಳು ಹೇಳಿದ್ದಾರೆ. ಘಟನೆಯಲ್ಲಿ ಗಾಯಾಗೊಂಡವರನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗದಹಳ್ಳಿ ಪೋಲಿಸರು ಸ್ಥಳಕ್ಕೇ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details