ಚಿಕ್ಕಬಳ್ಳಾಪುರ :ಬಿಸಿಲಿನಿಂದ ರಕ್ಷಣೆ ಪಡೆಯಲು ಗೌರಿಬಿದನೂರು ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಹೆಚ್ ಪಿ ಫೌಂಡೇಷನ್ ವತಿಯಿಂದ ಸಂಸ್ಥೆಯ ಮುಖ್ಯಸ್ಥ ಪುಟ್ಟಸ್ವಾಮಿಗೌಡ ಛತ್ರಿಗಳನ್ನು ವಿತರಿಸಿದರು.
ಗೌರಿಬಿದನೂರು : ಬಿಸಿಲಿನಿಂದ ರಕ್ಷಣೆ ಪಡೆಯಲು ಬೀದಿ ಬದಿ ವ್ಯಾಪಾರಸ್ಥರಿಗೆ ಛತ್ರಿ ವಿತರಣೆ
ಮಳೆ,ಗಾಳಿ, ಬಿಸಿಲು ಲೆಕ್ಕಿಸದೆ ಹಣ್ಣು-ತರಕಾರಿ ವ್ಯಾಪಾರದಲ್ಲಿ ನಿರತರಾಗುವ ಇವರಿಂದ ಸಮಾಜಕ್ಕೆ ಅಪಾರ ಕೊಡುಗೆಯಿದೆ. ಹಾಗಾಗಿ, ಇವರಿಗೆ ನೆರವಾಗಲೆಂದು ಛತ್ರಿಗಳನ್ನು ವಿತರಿಸಿದ್ದೇವೆ..
ಬೀದಿ ಬದಿ ವ್ಯಾಪಾರಸ್ಥರಿಗೆ ಛತ್ರಿ ವಿತರಿಸಲಾಯಿತು
ಬಳಿಕ ಮಾತನಾಡಿದ ಪುಟ್ಟಸ್ವಾಮಿಗೌಡ, ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರುವ ಜನ ಬಿಸಿಲಿನ ತಾಪ ತಾಳದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆ,ಗಾಳಿ, ಬಿಸಿಲು ಲೆಕ್ಕಿಸದೆ ಹಣ್ಣು-ತರಕಾರಿ ವ್ಯಾಪಾರದಲ್ಲಿ ನಿರತರಾಗುವ ಇವರಿಂದ ಸಮಾಜಕ್ಕೆ ಅಪಾರ ಕೊಡುಗೆಯಿದೆ. ಹಾಗಾಗಿ, ಇವರಿಗೆ ನೆರವಾಗಲೆಂದು ಛತ್ರಿಗಳನ್ನು ವಿತರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾಂತರಾಜು, ಶ್ರೀನಿವಾಸ್ ಗೌಡ, ಅನಂತ, ನರಸಿಂಹಮೂರ್ತಿ, ಸಂದೀಪ್ ಡೆಲ್ಲಿ, ಲಕ್ಷ್ಮಿಕಾಂತ್, ರೆಹಮಾನ್, ನಾಗಾರ್ಜುನ ಸೇರಿ ಇತರರಿದ್ದರು.