ಕರ್ನಾಟಕ

karnataka

By

Published : Jul 10, 2020, 2:52 PM IST

ETV Bharat / state

ಈಟಿವಿ ಭಾರತ ಫಲಶೃತಿ: ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಯಿಸಿದ ಗ್ರಾ.ಪಂ

ಈಟಿವಿ ಭಾರತ ವರದಿ ಪ್ರಕಟಿಸಿದ ಬೆನ್ನಲ್ಲೇ ಬಾಗೇಪಲ್ಲಿ ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತ್​ ವ್ಯಾಪ್ತಿಯ ಹೊನ್ನಂಪಲ್ಲಿಗೆ ಕೊಳವೆಬಾವಿ ಭಾಗ್ಯ ಒದಗಿಬಂದಿದೆ.

ETV Bharat impact
ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ

ಬಾಗೇಪಲ್ಲಿ: ತಾಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದು, ಕೊಳವೆಬಾವಿ ಕೊರೆಯಿಸಿ ಅನುಕೂಲ ಮಾಡಿಕೊಡುವಂತೆ ಹೊನ್ನಂಪಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಕುರಿತು ಈಟಿವಿ ಭಾರತದಲ್ಲಿ ಪ್ರಕಟಿಸಿದ ವರದಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಪಂದಿಸಿದ್ದಾರೆ.

ನಿತ್ಯವೂ ನೀರಿಗಾಗಿ ಜನರ ಪರದಾಟ; ಇನ್ನಾದರೂ ಸರ್ಕಾರ ಇತ್ತ ಗಮನಿಸಬೇಕಿದೆ! ಎಂಬ ಶೀರ್ಷಿಕೆಯಡಿ ಜುಲೈ 6ರಂದು ವರದಿ ಪ್ರಕಟಿಸಿ ಗ್ರಾಮ ಪಂಚಾಯತ್​ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.‌

ಹೊನ್ನಂಪಲ್ಲಿ ಗ್ರಾಮದ ಯುವಕ ಸತೀಶ್

ಜನರ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು ಇಂದು ಕೊಳವೆ ಬಾವಿಯನ್ನು ಕೊರೆಸುತ್ತಿದ್ದು, ನೀರು ಲಭ್ಯವಾಗಿದೆ ಎಂದು ಗ್ರಾಮದ ಯುವಕ ಸತೀಶ್ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈಟಿವಿ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ವರದಿ ಓದಿ ಗ್ರಾಮಸ್ಥರ ಬಹುದಿನಗಳ ಸಮಸ್ಯೆಗೆ ಸ್ಪಂದಿಸಿರುವ ಗ್ರಾಮ ಪಂಚಾಯತ್​ ಅಧಿಕಾರಿಗಳಿಗೆ ಧನ್ಯವಾದ ತಿಳಿಸುತ್ತೇವೆ.

ABOUT THE AUTHOR

...view details