ಕರ್ನಾಟಕ

karnataka

By

Published : Jun 9, 2020, 10:15 AM IST

ETV Bharat / state

ನಿಮ್ಮಕಾಯಲಹಳ್ಳಿ ದರ್ಗಾಗೆ ಮೇಲುಸ್ತುವಾರಿ ನೇಮಿಸಿದ ವಕ್ಫ್ ಮಂಡಳಿ

ಚಿಕ್ಕಬಳ್ಳಾಪುರದ ನಿಮ್ಮಕಾಯಲಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಶಾ ಮೌಲಾ ಬಾಬಾ ದರ್ಗಾ ಉಸ್ತುವಾರಿ ನಡೆಸುತ್ತಿದ್ದ ಬಾಬಾ ಜಾನ್ ಅವಧಿ ಮುಗಿದ ಕಾರಣ ಮೇಲುಸ್ತುವಾರಿಯನ್ನು ನೇಮಿಸಲಾಗಿದೆ.

Chikkaballapur
ಮುಜಾವರ್​ಗೆ ದರ್ಗಾ ಮೇಲುಸ್ತುವಾರಿ ಹಸ್ತಾಂತರಿಸಲಾಯಿತು.

ಚಿಕ್ಕಬಳ್ಳಾಪುರ (ಚಿಂತಾಮಣಿ): ನಂದಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಮ್ಮಕಾಯಲಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಶಾ ಮೌಲಾ ಬಾಬಾ ದರ್ಗಾದ ಮೇಲುಸ್ತುವಾರಿಯಾಗಿ ಮುಜಾವರ್​ ನವೀದ್ ಪಾಷಾ ಅವರನ್ನು ನೇಮಿಸಲಾಗಿದೆ.

ಹಜರತ್ ಸೈಯದ್ ಜಲಾಲ್ ಖಾಕಿ ಶಾ ಮೌಲಾ ಬಾಬಾ ದರ್ಗಾ

ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷಾರವರಿಗೆ ದರ್ಗಾದ ಬೀಗದ ಕೀಗಳನ್ನು ನೀಡುವುದರ‌ ಮೂಲಕ ದರ್ಗಾದ ಅಧಿಕಾರವನ್ನು ಹಸ್ತಾಂತರಿಸಲಾಗಿದೆ. ವರ್ಷದ ಹಿಂದೆ ವಕ್ಫ್ ಮಂಡಳಿ ನಿಯಮಗಳ ಪ್ರಕಾರ, ಜಿಲ್ಲಾ ವಕ್ಫ್ ಅಧಿಕಾರಿಯಾದ ನವೀದ್ ಪಾಷಾ ಅವರ ನೇತೃತ್ವದಲ್ಲಿ ಬಾಬಾಜಾನ್ ಅವರಿಗೆ ಅಧಿಕಾರವನ್ನು ವಹಿಸಲಾಗಿತ್ತು. ಈಗ ಮತ್ತೆ ಮುಜಾವರ್​ ನವೀದ್ ಪಾಷಾರವರಿಗೆ ಅಧಿಕಾರವನ್ನು ನೀಡಲಾಗಿದೆ.

ದರ್ಗಾಗೆ ಮೇಲುಸ್ತುವಾರಿ ನೇಮಿಸಿದ ದರ್ಗಾ ವರ್ಕ್ಪ್ ಮಂಡಳಿ

ಜಿಲ್ಲಾ ವಕ್ಫ್ ಅಧಿಕಾರಿ ನವೀದ್ ಪಾಷಾ ಮಾತನಾಡಿ, ದರ್ಗಾ ಸಮಿತಿಯ ಅವಧಿ ಮುಗಿದಿದ್ದು ಕೂಡಲೇ ದರ್ಗಾ ಆಡಳಿತ ಅಧಿಕಾರಿಯನ್ನು ನೇಮಕ ಮಾಡಲು ರಾಜ್ಯ ವಕ್ಫ್ ಮಂಡಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಆರೀಫ್ ಖಾನ್, ತಯ್ಯೂಬ್ ನವಾಜ್ ಮತ್ತಿತರು ಉಪಸ್ಥಿತರಿದ್ದರು.

ABOUT THE AUTHOR

...view details