ಕರ್ನಾಟಕ

karnataka

ETV Bharat / state

ಬೈಕ್​ಗೆ ಶಾಲಾ ವಾಹನ ಡಿಕ್ಕಿ... ಬೆಸ್ಕಾಂ ಅಧಿಕಾರಿ ಸ್ಥಳದಲ್ಲಿಯೇ ಸಾವು

ಶಿಡ್ಲಘಟ್ಟ ನಗರದ ಬಿಜಿಎಸ್ ಶಾಲೆಯ ವಾಹನ ತಾತಹಳ್ಳಿ ಕಡೆಯಿಂದ ಬರುವಾಗ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದಿದೆ.

By

Published : Mar 14, 2019, 3:04 PM IST

ಅಪಘಾತ

ಚಿಕ್ಕಬಳ್ಳಾಪುರ : ಶಾಲಾ ವಾಹನ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ತಾತಹಳ್ಳಿ ಗೇಟ್ ಬಳಿ ನಡೆದಿದೆ.

ಬೈಕ್ ಸವಾರ ಅನೂರು ಗ್ರಾಮದ ಮೋಹನ್ (35) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಶಿಡ್ಲಘಟ್ಟ ನಗರದ ಬಿಜಿಎಸ್ ಶಾಲೆಯ ವಾಹನ ತಾತಹಳ್ಳಿ ಕಡೆಯಿಂದ ಬರುವಾಗ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದಿದೆ.

ಮೋಹನ್ ಮೃತ ಪಟ್ಟಿದ್ದು, ಬೈಕ್​ನಲ್ಲಿದ್ದ ಪ್ರಶಾಂತ್ ಎಂಬುವರಿಗೆ ಗಾಯಗಳಾಗಿದ್ದು, ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತ ಮೋಹನ್ ಬೆಸ್ಕಾಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details