ಚಾಮರಾಜನಗರ: ಕಾಡಿನಿಂದ ದಿಕ್ಕು ತಪ್ಪಿ ಗ್ರಾಮದತ್ತ ಬಂದ ಜಿಂಕೆಯೊಂದು ಬೀದಿನಾಯಿಗಳ ದಾಳಿಗೆ ಬಲಿಯಾದ ಘಟನೆ ಚಾಮರಾಜನಗರ ತಾಲೂಕಿನ ಪುಣಜೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ನಾಡಿಗೆ ಆಹಾರ ಅರಸಿ ಬಂದ ಜಿಂಕೆ... ನಾಯಿಗಳ ದಾಳಿಗೆ ಬಲಿ
ಆಹಾರ ಅರಸಿ ಗ್ರಾಮದತ್ತ ಬಂದ ಜಿಂಕೆಯೊಂದು ನಾಯಿಗಳ ದಾಳಿಗೆ ಬಲಿಯಾದ ಘಟನೆ ಚಾಮರಾಜನಗರ ತಾಲೂಕಿನ ಪುಣಜೂರು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಜಿಂಕೆ ನಾಯಿ ದಾಳಿಗೆ ಬಲಿ
ಚಾಮರಾಜನಗರ ತಾಲೂಕಿನ ದೊಡ್ಡಮೂಡಹಳ್ಳಿಯತ್ತ ಆಹಾರ ಅರಸಿ ಬಂದ 5-6 ವರ್ಷದ ಜಿಂಕೆಯನ್ನು ಬೀದಿನಾಯಿಗಳು ಬೆನ್ನಟ್ಟಿ ಕಚ್ಚಿ ಸಾಯಿಸಿವೆ.
ಬೀದಿ ನಾಯಿಗಳ ಹಾವಳಿ ತಡೆಗಟ್ಟದೇ ಇರುವುದಕ್ಕೆ ಪ್ರಾಣಿ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಬೀದಿನಾಯಿಗಳ ಉಪಟಳ ಕಂಡು ಬೆದರಿದ್ದು, ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇನ್ನು, ಮೃತಪಟ್ಟ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಸುಡಲಾಗಿದೆ.