ಕರ್ನಾಟಕ

karnataka

By

Published : Apr 12, 2021, 5:55 PM IST

ETV Bharat / state

ಚಾಮರಾಜನಗರ: ಮುಷ್ಕರದ ನಡುವೆ ರಸ್ತೆಗಿಳಿದ ಕೆಎಸ್​​​ಆರ್​​ಟಿಸಿ ಬಸ್​ ಮೇಲೆ ಕಲ್ಲೆಸೆತ

ಸಾರಿಗೆ ನೌಕರರ ಮುಷ್ಕರ ನಡುವೆ ರಸ್ತೆಗಿಳಿದಿದ್ದ ಕೆಎಸ್​ಆರ್​​ಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಬೇರೊಂದು ಬಸ್ಸಿನಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದ್ದು, ಯಾರಿಗೂ ಗಾಯವಾಗಿಲ್ಲ.

Stone pelted on KSRTC Bus in Chamarajnagar
ಮುಷ್ಕರದ ನಡುವೆ ರಸ್ತೆಗಿಳಿದ ಕೆಎಸ್​​​ಆರ್​​ಟಿಸಿ ಬಸ್​ ಮೇಲೆ ಕಲ್ಲೆಸೆತ

ಚಾಮರಾಜನಗರ: ಮುಷ್ಕರದ ನಡುವೆ ಸಂಚರಿಸಿದ ಕೆಎಸ್​ಆರ್​ಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಹಾನಿ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಬಳಿ ನಡೆದಿದೆ.

ಮುಷ್ಕರದ ನಡುವೆ ರಸ್ತೆಗಿಳಿದ ಕೆಎಸ್​​​ಆರ್​​ಟಿಸಿ ಬಸ್​ ಮೇಲೆ ಕಲ್ಲೆಸೆತ

ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಬಸ್ ಮೇಲೆ ಬೈಕ್​ನಿಂದ ಬಂದ ಇಬ್ಬರು ಅಪರಿಚಿತರು ಕಲ್ಲು ತೂರಿ ಪರಾರಿಯಾಗಿದ್ದಾರೆ. ಬಸ್​​ನಲ್ಲಿ 22 ಮಂದಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಘಟನೆ ನಡೆಯುತ್ತಿದ್ದಂತೆ ಬೇರೊಂದು ಬಸ್​​​​ನಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ.

ABOUT THE AUTHOR

...view details