ಕರ್ನಾಟಕ

karnataka

ETV Bharat / state

ವಿಶ್ರೀಗೆ ರಕ್ತ ಕೊಡ್ತೀವಿ ಆದ್ರೆ ಬಿಜೆಪಿಗೆ ಮತ ನೀಡಲ್ಲ... ವೈರಲ್​ ಆಗಿದೆ ಅಭಿಮಾನಿಯ ಸಂದೇಶ!

ವಿ.ಶ್ರೀನಿವಾಸ ಪ್ರಸಾದ್​ರಿಗೆ ರಕ್ತ ಕೊಡುತ್ತೀವಿ. ಆದರೆ, ಬಿಜೆಪಿಗೆ ಮಾತ್ರ ಓಟು ಕೊಡಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, ನಮ್ಮ ಮುಂದಿನ ಪೀಳಿಗೆಯ ಪ್ರಶ್ನೆ ಎಂದು ಅನಾಮಿಕ ಅಭಿಮಾನಿಯು ಹಲವಾರು ಕಾರಣಗಳನ್ನು ನೀಡಿ, ನಿಮಗೆ ಮತ ನೀಡಲ್ಲ ಎಂದು ಹೇಳಿದ್ದಾನೆ.

By

Published : Apr 1, 2019, 10:23 AM IST

ವಿ.ಶ್ರೀನಿವಾಸ ಪ್ರಸಾದ್

ಚಾಮರಾಜನಗರ: ಚುನಾವಣಾ ಕಣ ರಂಗೇರುತ್ತಿದ್ದಂತೆ ಜಿಲ್ಲೆಯಲ್ಲಿ ಡಿಜಿಟಲ್ ವಾರ್ ಬಿರುಸುಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಸಂದೇಶಗಳು ವೈರಲ್​ ಆಗುತ್ತಿವೆ.

ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕಾರಣಕ್ಕೆ ಮರಳಿದ್ದನ್ನೇ ಪ್ರಶ್ನಿಸಿ ಹಲವರು 13 ಪ್ರಶ್ನೆಗಳನ್ನು ಕೇಳಿದ್ದರು.‌ ಅದಕ್ಕೆ,‌ ಬಿಜೆಪಿಯು ಸವಿವರವಾದ ಮರು ಉತ್ತರ ನೀಡಿತ್ತು. ಈಗ, ಅಭಿಮಾನಿಯೋರ್ವ ಬರೆದಿರುವ ಪತ್ರವೊಂದು ಸಖತ್ ವೈರಲ್ ಆಗಿದೆ.

ವಿ.ಶ್ರೀನಿವಾಸ ಪ್ರಸಾದ್

ವಿ.ಶ್ರೀನಿವಾಸ ಪ್ರಸಾದ್​ರಿಗೆ ರಕ್ತ ಕೊಡುತ್ತೀವಿ. ಆದರೆ, ಬಿಜೆಪಿಗೆ ಮಾತ್ರ ಓಟು ಕೊಡಲ್ಲ, ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, ನಮ್ಮ ಮುಂದಿನ ಪೀಳಿಗೆಯ ಪ್ರಶ್ನೆ ಎಂದು ಅನಾಮಿಕ ಅಭಿಮಾನಿಯು ಹಲವಾರು ಕಾರಣಗಳನ್ನು ನೀಡಿ, ನಿಮಗೆ ಮತ ನೀಡಲ್ಲ ಎಂದು ಹೇಳಿದ್ದಾನೆ.

ಆತ ಹರಿಬಿಟ್ಟಿರುವ ಸಂದೇಶವನ್ನು ಕಾಂಗ್ರೆಸ್ ಕಾರ್ಯಕರ್ತರು ವೈರಲ್ ಮಾಡುತ್ತಿದ್ದು, ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ABOUT THE AUTHOR

...view details