ಕರ್ನಾಟಕ

karnataka

ETV Bharat / state

ಸೋಬಾನೆ ನಿಲ್ಲಿಸಿದ ತಾಯಮ್ಮ: ಇವ್ರ ಕಂಠಸಿರಿಗೆ ಸಂದಿತ್ತು ಅಕಾಡೆಮಿ ಗೌರವ

ಚಾಮರಾಜನಗರದ ಸೋಬಾನೆ ಕಲಾವಿದೆ ತಾಯಮ್ಮ ಕೆಲವು ದಿನಗಳಿಂದ ಪಾರ್ಶವಾಯುವಿಗೆ ತುತ್ತಾಗಿ ನಿಧನರಾಗಿದ್ದಾರೆ.

By

Published : Sep 7, 2019, 8:44 AM IST

ತಾಯಮ್ಮ

ಚಾಮರಾಜನಗರ: ಜಾನಪದ ಸೊಗಡಿನ ಸೋಬಾನೆ ಕಲಾವಿದೆ ತಾಯಮ್ಮ(70) ತೀವ್ರ ಅನಾರೋಗ್ಯದಿಂದ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ನಗರದ ಗಾಳಿಪುರ ಬಡಾವಣೆಯಲ್ಲಿ ವಾಸವಾಗಿದ್ದ ಅವರು ಕಳೆದ ಕೆಲವು ದಿನಗಳಿಂದ ಪಾರ್ಶ್ವ ವಾಯುವಿಗೆ ತುತ್ತಾಗಿ ಕಳೆದ 15 ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಡುಬಡತನದಲ್ಲೇ ಹುಟ್ಟಿ ಬಡತನದಿಂದಲೇ ತಮ್ಮ ಜೀವನವನ್ನು ಮುಗಿಸಿದ್ದಾರೆ.

ಸೋಬಾನೆ ಪದದ ಗಾಯನದ ಮೋಡಿಗೆ 2014 ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಸಂದಿತ್ತು. ತಾಯಮ್ಮ ಅವರು 105 ವರ್ಷದ ತಾಯಿ ಮತ್ತು ಸೋದರಿಯರನ್ನು ಅಗಲಿದ್ದು, ಜಾನಪದ ಕಲಾವಿದರು ಮೃತರಿಗೆ ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details