ಕರ್ನಾಟಕ

karnataka

ETV Bharat / state

ಕುಡಿವ ನೀರಿಗಾಗಿ ಚಾಮರಾಜನಗರದ ಉಡಿಗಾಲದಲ್ಲಿ ರಸ್ತೆ ತಡೆ!

ನೀರು ಬಿಡುತ್ತೇನೆಂದು ಭರವಸೆ ನೀಡಿ, ಬಳಿಕ ಅದನ್ನು ಈಡೇರಿಸದಿದ್ದರಿಂದ ಗ್ರಾಮಸ್ಥರು ರಸ್ತೆ ತಡೆದು ಶಾಸಕ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

By

Published : Jan 1, 2020, 3:53 PM IST

ರಸ್ತೆತಡೆ
ರಸ್ತೆತಡೆ

ಚಾಮರಾಜನಗರ: ನೀರು ಬಿಡುತ್ತೇನೆಂದು ಭರವಸೆ ನೀಡಿ ಈಡೇರಿಸದಿದ್ದರಿಂದ ರೊಚ್ಚಿಗೆದ್ದ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮಸ್ಥರು ಅರ್ಧ ತಾಸಿನಿಂದ ರಸ್ತೆ ತಡೆ ನಡೆಸಿದರು.

ಕುಡಿವ ನೀರಿನ ಬವಣೆ ತಗ್ಗಿಸಲು ಆನೆ ಮಡುವಿನ ಕೆರೆಗೆ ನೀರು ಹರಿಸಲಾಗುವುದು ಎಂದು ಶಾಸಕ ಪುಟ್ಟರಂಗಶೆಟ್ಟಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಸದಿದ್ದರಿಂದ ಗ್ರಾಮಸ್ಥರು ರಸ್ತೆ ತಡೆದು ಶಾಸಕ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

ಚಾಮರಾಜನಗರದ ಉಡಿಗಾಲದಲ್ಲಿ ರಸ್ತೆತಡೆ

ಸಣ್ಣ ನೀರಾವರಿ ಇಲಾಖೆಯಿಂದ ನೀರು ಹರಿಸುವ ಕಾರ್ಯ ಸ್ಥಗಿತಗೊಂಡಿದ್ದೇ ಈ ಅವಾಂತರಕ್ಕೆ ಕಾರಣ ಎಂದು ತಿಳಿದು ಬಂದಿದೆ.

ABOUT THE AUTHOR

...view details