ಕರ್ನಾಟಕ

karnataka

ETV Bharat / state

ಕೈ​ ಅಭ್ಯರ್ಥಿ ಧ್ರುವನಾರಾಯಣ ಪ್ರಚಾರದಲ್ಲಿ ಮೋದಿಗೆ ಜೈ ಎಂದ ಮತದಾರರು!

ಚಾಮರಾಜನಗರ ಕಾಂಗ್ರೆಸ್​ ಅಭ್ಯರ್ಥಿ ಧ್ರುವನಾರಾಯಣ್ ಪ್ರಚಾರದ ಮೊಳಗಿದ ಮೋದಿ ಪರ ಘೋಷಣೆ- ಗ್ರಾಮಸ್ಥರಿಂದ ಪ್ರಚಾರಕ್ಕೆ ಅಡ್ಡಿ- ಪ್ರಚಾರ ಮೊಟುಕುಗೊಳಿಸಿ ಗ್ರಾಮದಿಂದ ಕಾಲ್ಕಿತ್ತ ಧ್ರುವನಾರಾಯಣ.

By

Published : Apr 1, 2019, 8:09 PM IST

ಸಂಸದ ಧ್ರುವರ ಕಾಂಗ್ರೆಸ್ ಪ್ರಚಾರ

ಚಾಮರಾಜನಗರ: ಹಾಲಿ ಸಂಸದ ಆರ್. ಧ್ರುವನಾರಾಯಣ್​ ಹಾಗೂ ಮಾಜಿ ಸಂಸದ ಕಾಗಲವಾಡಿ ಪ್ರಚಾರ ನಡೆಸುವ ವೇಳೆ ಮೋದಿ ಪರ ಘೋಷಣೆ ಕೇಳಿ ಬಂದಿದೆ.

ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್​ ಪ್ರಸಾದ್​ ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ. ಅವರಿಗೇಕೆ ಮತ ಹಾಕುತ್ತೀರಿ ಎಂಬ ಕಾಗಲವಾಡಿ ಶಿವಣ್ಣ ಮಾತಿಗೆ ಕುಪಿತಗೊಂಡ ಗ್ರಾಮಸ್ಥರು ಸಂಸದ ಧ್ರುವನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಧ್ರುವರ ಕಾಂಗ್ರೆಸ್ ಪ್ರಚಾರ

ಸಂಸದರಾಗಿ ನಮ್ಮ ಊರಿಗೆ ನಿಮ್ಮ ಕೊಡುಗೆ ಏನು? 5 ವರ್ಷದ ಬಳಿಕ ನಮ್ಮ ಊರಿಗೆ ಮತ ಕೇಳಲು ಬಂದಿದ್ದೀರಿ ಎಂದು ಹಾಲಿ ಹಾಗೂ ಮಾಜಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ಧ್ರುವನಾರಾಯಣ್ ಪ್ರಚಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು ಮೋದಿ-ಮೋದಿ ಎಂದು ಘೋಷಣೆ ಸಹ ಕೂಗಿದ್ದಾರೆ. ಇದರಿಂದ ಧ್ರುವನಾರಾಯಣ್​ ಪ್ರಚಾರ ಮೊಟುಕುಗೊಳಿಸಿ ಗ್ರಾಮದಿಂದ ತೆರಳಿದರು.

For All Latest Updates

ABOUT THE AUTHOR

...view details