ಕರ್ನಾಟಕ

karnataka

ಲಾಡ್ಜ್​ನಲ್ಲಿ ಪೊಲೀಸ್ ಜೀಪ್​ ಚಾಲಕನ ದಾಂಧಲೆ: ಬೈಕಿನಲ್ಲಿ ಇದ್ದಿದ್ದೇನು?

ಪೊಲೀಸ್ ಜೀಪ್ ಚಾಲಕ ಹಾಗೂ ಸ್ನೇಹಿತರು ಕುಡಿದು ಲಾಡ್ಜ್​ನಲ್ಲಿ ದಾಂಧಲೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

By

Published : Jan 15, 2021, 10:42 AM IST

Published : Jan 15, 2021, 10:42 AM IST

Chamarajnagar
ಪೊಲೀಸ್ ಜೀಪ್​ ಚಾಲಕ ದಾಂಧಲೆ

ಚಾಮರಾಜನಗರ:ಪೊಲೀಸ್ ಜೀಪ್ ಚಾಲಕ ಹಾಗೂ ಮತ್ತವರ ಸ್ನೇಹಿತರು ಕುಡಿದು ಲಾಡ್ಜ್​ನಲ್ಲಿ ದಾಂಧಲೆ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

ಬೇಗೂರು ಪೊಲೀಸ್ ಠಾಣೆಯ ಜೀಪ್ ಚಾಲಕ ನಾಗೇಶ್ ಎಂಬವರು ಲಾಡ್ಜ್ ಮ್ಯಾನೇಜರ್ ವಿ.ಟಿ.ರಾಜೀವ್ ಎಂಬವರ ಮೇಲೆ ಹಲ್ಲೆಗೆ ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ನಾಗೇಶ್ ಸ್ನೇಹಿತರು ಭಾಗಿಯಾಗಿ ಲಾಡ್ಜ್​ನಲ್ಲಿದ್ದ ಹೂಕುಂಡಗಳನ್ನು ಒಡೆದು ದಾಂಧಲೆ ನಡೆಸಿದ್ದಾರೆ. ಗಲಾಟೆಯ ವಿಷಯ ಅರಿತು ಗುಂಡ್ಲುಪೇಟೆ ಸಿಪಿಐ ಸ್ಥಳಕ್ಕಾಗಮಿಸುತ್ತಿದ್ದಂತೆಯೇ ದಾಂಧಲೆ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ.

ಪೊಲೀಸ್ ಜೀಪ್ ಚಾಲಕ ನಾಗೇಶ್ ಬೈಕ್‍ನಲ್ಲಿ ಕಾರದ ಪುಡಿ, ಆಕ್ಸಲ್ ಬ್ಲೇಡ್, ಚಾಕು ಇದ್ದಿದ್ದು ಮತ್ತಷ್ಟು ಗುಮಾನಿಗೆ ಕಾರಣವಾಗಿದೆ. ಈ ಸಂಬಂಧ ವಿ.ಟಿ.ರಾಜೀವ್ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ತನಗೆ ರಕ್ಷಣೆ ಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details