ಕರ್ನಾಟಕ

karnataka

ETV Bharat / state

ನೀರೆಂದು ತಿಳಿದು ಸೀಮೆ ಎಣ್ಣೆ ಕುಡಿದ ಬಾಲಕಿ ಸಾವು

ಮೈಸೂರಿನಿಂದ ಅಜ್ಜಿ ಮನೆಗೆ ಬಂದಿದ್ದ ಬಾಲಕಿವೋರ್ವಳು ನೀರು ಎಂದು ತಿಳಿದು ಸೀಮೆ ಎಣ್ಣೆ ಕುಡಿರು ಸಾವನ್ನಪ್ಪಿದ್ದಾಳೆ. ಚಾಮರಾಜನಗರ ಜಿಲ್ಲೆಯ ಬೇಡರಪುರದಲ್ಲಿ ಈ ಘಟನೆ ನಡೆದಿದೆ.

By

Published : May 1, 2019, 5:51 PM IST

ಬಾಲಕಿ ಸಾವು

ಚಾಮರಾಜನಗರ:ನೀರೆಂದು ಭಾವಿಸಿ ಸೀಮೆಎಣ್ಣೆ ಕುಡಿದು ಮೂರು ವರ್ಷದ ಬಾಲಕಿವೋರ್ವಳು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರದಲ್ಲಿ ನಡೆದಿದೆ.

ರಕ್ಷಿತಾ ಮೃತಪಟ್ಟ ಬಾಲಕಿ. ಮೈಸೂರಿನಿಂದ ಅಜ್ಜಿ ಮನೆಗೆ ಬಂದಿದ್ದ ರಕ್ಷಿತಾ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನೀರೆಂದು ಸೀಮೆಎಣ್ಣೆ ಸೇವಿಸಿದ್ದಳು.

ವಿಚಾರ ಅರಿತ ಪಾಲಕರು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details