ಕೊಳ್ಳೇಗಾಲ: ತಾಲೂಕಿನ ದಾಸನಪುರ ಗ್ರಾಮದ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತದೇಹ ಶಿವನ ಸಮುದ್ರ ಸಮೀಪದ ವೆಸ್ಲಿ ಸೇತುವೆ ಬಳಿ ಪತ್ತೆಯಾಗಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕುರುಬಾಳನಹುಂಡಿ ಗ್ರಾಮದ ಬಸವರಾಧ್ಯ (32) ಮೃತ ವ್ಯಕ್ತಿ. ಜು.24 ರಂದು ಕೊಳ್ಳೇಗಾಲದ ಆಸ್ಪತ್ರೆಗೆ ತೆರಳಲು ಸಹೋದರರಿಬ್ಬರು ಬೈಕ್ನಲ್ಲಿ ಬರುತ್ತಿದ್ದ ವೇಳೆ ಬೈಕ್ ನಿಲ್ಲಿಸಿ ತಮ್ಮನ ಮುಂದೆಯೇ ಬಸವರಾಧ್ಯ ನದಿಗೆ ಹಾರಿದ್ದರು.