ಕರ್ನಾಟಕ

karnataka

ETV Bharat / state

ಕಾನ್ವೆಂಟ್​​ ವ್ಯಾಮೋಹಕ್ಕೆ ಬಾಗಿಲು ಮುಚ್ಚಿತು ಶತಮಾನದಂಚಿನಲ್ಲಿರುವ ಶಾಲೆ!

ಇಂಗ್ಲಿಷ್ ವ್ಯಾಮೋಹದಿಂದ ಸುಮಾರು 84 ವರ್ಷದ ಅನುದಾನಿತ ಶಾಲೆಯೊಂದು ವಿದ್ಯಾರ್ಥಿಗಳಿಲ್ಲದೇ ಬಾಗಿಲೆಳೆದುಕೊಂಡಿದೆ.

By

Published : Jul 9, 2019, 4:23 PM IST

ಇಂಗ್ಲಿಷ್​ ಕಾನ್ವೆಂಟ್ ಮೋಹದಿಂದ ಅನುದಾನಿತ ಶಾಲೆಗೆ ಬೀಗ

ಚಾಮರಾಜನಗರ:ಮಕ್ಕಳ ಪೋಷಕರು ಇಂಗ್ಲಿಷ್​ ಕಾನ್ವೆಂಟ್​ಗಳ ಮೊರೆ ಹೋಗಿದ್ದರಿಂದ ಚಾಮರಾಜನಗರ ಜಿಲ್ಲೆಯ ಸುಮಾರು 84 ವರ್ಷದಷ್ಟು ಹಳೆಯದಾದ ಶಾಲೆಯೊಂದು ಮುಚ್ಚಿದೆ.

ಕೊಳ್ಳೇಗಾಲದ ಅಣತಿ ದೂರದಲ್ಲೇ ಇರುವ ಸಿದ್ದಯ್ಯನಪುರ ಸರ್ಕಾರಿ ಅನುದಾನಿತ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಈ ಶೈಕ್ಷಣಿಕ ವರ್ಷದಿಂದ ಮುಚ್ಚಿದೆ. ಪೋಷಕರು ತಮ್ಮ ಮಕ್ಕಳನ್ನು ಕಾನ್ಬೆಂಟ್​​ಗಳಿಗೆ ದಾಖಲಿಸಿದ್ದರಿಂದ 84 ವರ್ಷದ ಶಾಲೆ ಮುಚ್ಚಿದ್ದು, ಗ್ರಾಮಸ್ಥರು ಮರುಕ ಪಡುತ್ತಿದ್ದಾರೆ. ಬ್ರದರನ್ ಕ್ರೈಸ್ತ ಮಿಷನರಿ ಸಂಸ್ಥೆ ಈ ಶಾಲೆಯನ್ನು ಪ್ರಾರಂಭಿಸಿತ್ತು. ಬಳಿಕ, ಸರ್ಕಾರಿ ಅನುದಾನಿತ ಶಾಲೆಯಾಗಿ ಮಾರ್ಪಟ್ಟಿತ್ತು.

ಇಂಗ್ಲಿಷ್​ ಕಾನ್ವೆಂಟ್ ಮೋಹದಿಂದ ಅನುದಾನಿತ ಶಾಲೆಗೆ ಬೀಗ

ಹಿಂದೆಲ್ಲಾ ಸುಮಾರು 300-400 ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದರು. ನಂತರ ಈ ಸಂಖ್ಯೆ 2016-17ರಲ್ಲಿ 70ಕ್ಕೆ ಇಳಿಯಿತು. 2017-18ರಲ್ಲಿ ಸಂಖ್ಯೆ ಹತ್ತಾಗಿತ್ತು. ಈ ವರ್ಷವೂ ಅದೇ ಮುಂದುವರೆದಿದ್ದರಿಂದ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯನ್ನು ಮುಚ್ಚಬಾರದು ಎಂದು ಈಗ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಆದರೆ, ಕಾನ್ವೆಂಟ್​​​ನಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಗೆ ಸೇರಿಸಲು ಪಾಲಕರು ಮುಂದಾಗುವುದು ಕನಸಿನ ಮಾತೇ ಸರಿ.

ABOUT THE AUTHOR

...view details