ಕರ್ನಾಟಕ

karnataka

By

Published : Jun 27, 2019, 10:51 PM IST

ETV Bharat / state

ಸಿಎಂ ಗೆ ಘೇರಾವ್ ಹಾಕ್ತಿನಿ ಎಂದಿದ್ದ ಶಾಸಕ ಪ್ರಭು ಚವ್ಹಾಣಗೆ... ಪೊಲೀಸರಿಂದ ತಡೆ

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಲವಾರು ಬಾರಿ ಮನವಿ ನೀಡಿದ್ರು ನನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಹೀಗಾಗಿ ಸಿಎಂ ಎಚ್.ಡಿಕೆ ಗ್ರಾಮ ವಾಸ್ತವ್ಯ ವೇಳೆಯಲ್ಲಿ ಘೇರಾವ್ ಹಾಕಿ ಕೇಳ್ತಿನಿ ಎಂದ ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ ಅವರನ್ನು ವೇದಿಕೆ ಪಕ್ಕದಲ್ಲೆ ತಡೆದ ಅಧಿಕಾರಿಗಳು ಕೆಲ ಕಾಲ ಮಾತುಕತೆ ನಡೆಸಿದರು.

ಸಿಎಂ ಗೆ ಘೇರಾವ್ ಹಾಕ್ತಿನಿ ಎಂದು ಎಚ್ಚರಿಸಿದ ಬಿಜೆಪಿ ಶಾಸಕ

ಬೀದರ್ : ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಹಲವಾರು ಬಾರಿ ಮನವಿ ನೀಡಿದ್ರು ನನ್ನ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಹೀಗಾಗಿ ಸಿಎಂ ಎಚ್.ಡಿಕೆ ಗ್ರಾಮ ವಾಸ್ತವ್ಯ ವೇಳೆಯಲ್ಲಿ ಘೇರಾವ್ ಹಾಕಿ ಕೇಳ್ತಿನಿ ಎಂದ ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ ಅವರನ್ನು ವೇದಿಕೆ ಪಕ್ಕದಲ್ಲೆ ತಡೆದ ಅಧಿಕಾರಿಗಳು ಕೆಲ ಕಾಲ ಮಾತುಕತೆ ನಡೆಸಿದರು.

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ನಿಮಿತ್ತ ಜನತಾ ದರ್ಶನ ಕಾರ್ಯಕ್ರಮ ವೇಳೆಯಲ್ಲಿ ಆಗಮಿಸಿದ ಪ್ರಭು ಚವ್ಹಾಣ ಅವರನ್ನು ವೇದಿಕೆ ಪಕ್ಕದಲ್ಲೆ ಇರುವ ಕೊಠಡಿ ಬಳಿ ಆಸನದ ವ್ಯವಸ್ಥೆ ಮಾಡಿ ಕೆಲ ಕಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಮಾತುಕತೆ ನಡೆಸಿದರು.

ಸಿಎಂ ಗೆ ಘೇರಾವ್ ಹಾಕ್ತಿನಿ ಎಂದು ಎಚ್ಚರಿಸಿದ ಬಿಜೆಪಿ ಶಾಸಕ

ನಂತರ ಮಧ್ಯ ಪ್ರವೇಶ ಮಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಸರ್ಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಗಾಗಿ 80 ಕೋಟಿ ಅನುದಾನದ ಯೋಜನೆ ಮಂಜೂರು ಮಾಡಿ ಕೊಡಿಸಲು ಕ್ರಮ ಕೈಗೊಳ್ಳುವುದಾಗಿ ನೀಡಿದ ಭರವಸೆ ಹಿನ್ನಲೆಯಲ್ಲಿ ತಣ್ಣಗಾದ ಶಾಸಕರು ವೇದಿಕೆ ಹತ್ತಿ ಕಾರ್ಯಕ್ರಮದಲ್ಲಿ ಭಾಗಿಯಾದರು.

ABOUT THE AUTHOR

...view details