ಕರ್ನಾಟಕ

karnataka

6ನೇ ವೇತನ ಆಯೋಗ ಜಾರಿ ಮಾಡುವಂತೆ ಸಿಎಂಗೆ ಬಾಲಕಿ ಮನವಿ

By

Published : Apr 8, 2021, 2:14 PM IST

6ನೇ ವೇತನ ಆಯೋಗ ಜಾರಿ‌‌ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಹೊಸಪೇಟೆಯ ಬಾಲಕಿಯೊಬ್ಬಳು ಮನವಿ ಮಾಡಿದ್ದಾಳೆ.

ಸಿಎಂಗೆ ಬಾಲಕಿ ಮನವಿ
ಸಿಎಂಗೆ ಬಾಲಕಿ ಮನವಿ

ಹೊಸಪೇಟೆ: ಆರನೇ ವೇತನ ಆಯೋಗ ಜಾರಿ‌‌ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ನೌಕರರೊಬ್ಬರ ಪುತ್ರಿಯೊಬ್ಬಳು ಮನವಿ ಮಾಡಿಕೊಂಡಿದ್ದಾಳೆ.

6ನೇ ವೇತನ ಆಯೋಗ ಜಾರಿ ಮಾಡುವಂತೆ ಮನವಿ ಮಾಡಿದ ಬಾಲಕಿ

ಲಲಿತಾ ಬಾಗೇವಾಡಿ ಮನವಿ ಮಾಡಿಕೊಂಡ ಬಾಲಕಿ. ನಮ್ಮ ತಂದೆ ಸಾರಿಗೆ ನೌಕರನಾಗಿದ್ದಾರೆ. ಒಳ್ಳೆಯ ಶಾಲೆ, ಶಿಕ್ಷಣ ಪಡೆಯಬೇಕೆಂಬ ಆಸೆ ನಮಗೂ ಇದೆ. ಈಗ ಬರುವ ಸಂಬಳ ಯಾವುದಕ್ಕೂ ಸಾಲುವುದಿಲ್ಲ. ನೀವು ಆರನೇ ವೇತನ ಆಯೋಗ ಜಾರಿ ಮಾಡಿ ಎಂದು ಹೇಳಿದ್ದಾಳೆ.

ABOUT THE AUTHOR

...view details