ಕರ್ನಾಟಕ

karnataka

By

Published : Nov 11, 2020, 8:38 PM IST

ETV Bharat / state

ನೇಮರಾಜ್​ ಮಾನಸಿಕ ಅಸ್ವಸ್ಥ, ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು: ಶಾಸಕ ಭೀಮಾನಾಯ್ಕ

ಬಿಜೆಪಿ ಕಾರ್ಯಕರ್ತರ ಹಗರಿಬೊಮ್ಮನಹಳ್ಳಿ ಬಂದ್​​ ವಿಚಾರವಾಗಿ ಶಾಸಕ ಭೀಮಾನಾಯ್ಕ ಪ್ರತಿಕ್ರಿಯಿಸಿದ್ದಾರೆ. ಮಾಜಿ ಶಾಸಕ ಕೆ.ನೇಮರಾಜ ನಾಯ್ಕ ಮಾನಸಿಕ ಅಸ್ವಸ್ಥ.ಅವರನ್ನು ಧಾರವಾಡದ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ctivists
ವಾಗ್ದಾಳಿ

ಬಳ್ಳಾರಿ: ಮಾಜಿ ಶಾಸಕ ಕೆ.ನೇಮರಾಜ ನಾಯ್ಕ ಮಾನಸಿಕ ಅಸ್ವಸ್ಥ. ಅವರನ್ನು ಧಾರವಾಡದ ಹುಚ್ಚಾಸ್ಪತ್ರೆಗೆ ಸೇರಿಸಬೇಕು ಅಂತ ಕಾಣಿಸುತ್ತೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದಿನ ನಡೆದ ಹಗರಿಬೊಮ್ಮನಹಳ್ಳಿ ಬಂದ್ ಅಥವಾ ಪ್ರತಿಭಟನೆ ಮಾಡಿರೋದು ಯಾವ ಪುರುಷಾರ್ಥಕ್ಕೆ ಅಂತ ಪ್ರಶ್ನಿಸಿದ್ದಾರೆ. ‌ನಾನು ತೋಳು ತಟ್ಟಿರೋದು ದುಂಡಾವರ್ತನೆಯಾದ್ರೆ, ಬಿಜೆಪಿ ಕಾರ್ಯಕರ್ತರು ಕಾಂಪೌಂಡ್ ಹಾರಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದು, ಯಾವ ವರ್ತನೆ ಎಂದು ಸ್ಪಷ್ಟಪಡಿಸಬೇಕೆಂದರು.

ಬಿಜೆಪಿ ಕಾರ್ಯಕರ್ತರಿಂದ ಹಗರಿಬೊಮ್ಮನಹಳ್ಳಿ ಬಂದ್​​ಗೆ ಶಾಸಕ ಭೀಮಾನಾಯ್ಕ ಪ್ರತಿಕ್ರಿಯೆ
ರೌಡಿ ಶೀಟರ್ ಹಿನ್ನೆಲೆಯುಳ್ಳ ಮಜ್ಜಿಗೆ ನಾಗರಾಜ ಹಾಗೂ ಗರಗದ ಪ್ರಕಾಶ್ ಅವರು ನಿಮ್ಮ ಹಿಂದೆ ಇದ್ದಾರೆ. ಅವರನ್ನ ಹಿಂದಿಟ್ಟುಕೊಂಡು ಇಂಥ ಗಲಭೆಗಳನ್ನು ಸೃಷ್ಟಿಸಿದ್ದಾರೆ. ಒಬ್ಬ ಮಾಜಿ ಶಾಸಕರಾಗಿದ್ದ ನೀವು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಏನ್​ ಬೇಕಾದ್ರೂ ಮಾಡಬಹುದಾ?‌ ನಾವೇನು ಇಲ್ಲಿ ಸುಮ್ಮನೆ ಕೂರಬೇಕಾ ಎಂದು ಕಿಡಿಕಾರಿದ್ದಾರೆ. ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ಗಲಾಟೆ ನಡೆದಿದೆ. ಈ ಗಲಭೆಗೆ ಹಗರಿಬೊಮ್ಮನಹಳ್ಳಿ ಸಿಪಿಐ ಮಲ್ಲಿಕಾರ್ಜುನ ಅವರೇ ಕಾರಣರು. ಅವರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಶಾಸಕ ಭೀಮಾ ನಾಯ್ಕ ಆಗ್ರಹಿಸಿದ್ದಾರೆ.

ABOUT THE AUTHOR

...view details