ಹೊಸಪೇಟೆ:ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ ಇತಿಹಾಸವನ್ನು ನೋಡಿದಾಗ ಜನರ ಬಡತನ ನಿವಾರಣೆಯಾಗಿಲ್ಲ. ಕಾಂಗ್ರೆಸ್ನವರ ಬಡತನ 'ಗರೀಬಿ ಹಟಾವೋ'ದಿಂದ ನಿವಾರಣೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಮಾತನಾಡಿ, ಕಾಂಗ್ರೆಸ್ನವರಿಗೆ ಜನ ಬೆಂಬಲ ಕಡಿಮೆಯಾಗಿದೆ. 40 ವರ್ಷದಿಂದ ಕಾಂಗ್ರೆಸ್ ಲೂಟಿ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳು ಜನರ ಸೇವೆ ಮಾಡುತ್ತಿದ್ದಾರೆ ಎಂದ್ರು.
ಕಾಂಗ್ರೆಸ್ನವರಿಗೆ ನಾಚಿಗೆಯಾಗಬೇಕು. ಗೋ ಹತ್ಯೆ ಕುರಿತು ಸಂವಿಧಾನದಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಗಾಂಧೀಜಿ ಅವರು ಸಹ ಹೇಳಿದ್ದಾರೆ. ಗಾಂಧೀಜಿ ಯಾರು.. ಕಾಂಗ್ರೆಸ್ನವರು. ಅವರು ಸಹ ಗೋ ಹತ್ಯೆ ನಿಷೇಧ ಕಾಯ್ದೆ ಆಗಬೇಕು ಎಂದು ಹೇಳಿದ್ದರು. ಈಗ ಕಾಂಗ್ರೆಸ್ನವರು ಗೋ ರಾಜಕಾರಣ ಮಾಡುತ್ತಿದ್ದಾರೆ. ನಾವು ಒಂದು ಆಕಳನ್ನು ಕೊಲ್ಲಲು ಬಿಡುವುದಿಲ್ಲ ಎಂದರು.