ಕರ್ನಾಟಕ

karnataka

By

Published : Feb 5, 2020, 12:53 PM IST

ETV Bharat / state

ಅಗತ್ಯವಿರುವ ವಿಸ್ತೀರ್ಣದ ಮಾಹಿತಿ ಒದಗಿಸಿ: ಇಲಾಖೆಗಳಿಗೆ ಎಡಿಸಿ ಮಂಜುನಾಥ ಸೂಚನೆ

ಎಡಿಸಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಂಕೀರ್ಣ ಕಟ್ಟಡ ವಿನ್ಯಾಸ ಅಂತಿಮಗೊಳಿಸುವಿಕೆ ಸಭೆ ನಡೆಯಿತು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

meeting
meeting

ಬಳ್ಳಾರಿ:ನಗರದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಸಂಕೀರ್ಣ ಕಟ್ಟಡದ ವಿನ್ಯಾಸ ಅಂತಿಮಗೊಳಿಸುವಿಕೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಸಂಕೀರ್ಣ ಕಟ್ಟಡ ಕಾಮಗಾರಿ ಭರದಿಂದ ಸಾಗಿದೆ. ಈ ಕಟ್ಟಡದ ವಿನ್ಯಾಸ ಅಂತಿಮಗೊಳಿಸಲಾಗುತ್ತಿದ್ದು, ಸರ್ಕಾರಿ ಇಲಾಖೆಗಳು ತಮಗೆ ಅಗತ್ಯವಿರುವಷ್ಟು ವಿಸ್ತೀರ್ಣದ ಮಾಹಿತಿಯನ್ನು ಕೂಡಲೇ ಒಪ್ಪಿಸಬೇಕು ಎಂದರು.

ಜಿಲ್ಲಾ ಸಂಕೀರ್ಣ ಕಟ್ಟಡದ ವಿನ್ಯಾಸ ಅಂತಿಮಗೊಳಿಸುವಿಕೆ ಕುರಿತು ಸಭೆ

ನಮ್ಮ ಇಲಾಖೆಯ ಸ್ವಂತ ಕಟ್ಟಡವಿದೆ. ಈ ಜಿಲ್ಲಾ ಸಂಕೀರ್ಣ ಕಟ್ಟಡದಲ್ಲಿ ನಮಗೆ ಅವಕಾಶ ಬೇಡ ಎಂದು ಹೇಳುವವರು ಲಿಖಿತವಾಗಿ ಸ ಸಲ್ಲಿಸಿದಲ್ಲಿ ಅದನ್ನು ಬೇರೆ ಅಗತ್ಯವಿರುವ ಇಲಾಖೆಗಳಿಗೆ ನೀಡಲಾಗುವುದು ಎಂದು ಹೇಳಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕಚೇರಿಗೆ ಅಗತ್ಯವಿರುವ ವಿಸ್ತೀರ್ಣದ ಮಾಹಿತಿಯನ್ನು ಈ ಸಂದರ್ಭದಲ್ಲಿ ಒದಗಿಸಿದರು. ಈ ಸಮಯದಲ್ಲಿ ಕರ್ನಾಟಕ ಗೃಹಮಂಡಳಿ ಅಧಿಕಾರಿಗಳಾದ ಶಿವಶಂಕರ, ದತ್ತಾತ್ರೇಯ ಶೆಟ್ಟಿ, ಡಿಯುಡಿಸಿ ಅಧಿಕಾರಿ ರಮೇಶ, ಸಹಕಾರ ಇಲಾಖೆಯ ಉಪನಿಬಂಧಕಿ ಡಾ.ಸುನೀತಾ ಸಿದ್ರಾಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ABOUT THE AUTHOR

...view details