ಕರ್ನಾಟಕ

karnataka

By

Published : Jan 18, 2021, 7:46 PM IST

ETV Bharat / state

ಹಂಪಿ ಕನ್ನಡ ವಿವಿಯ ಪಿಎಚ್​ಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿಲ್ಲ; ಮುನಿರಾಜು

ಹಂಪಿ ಕನ್ನಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು 450 ಇದ್ದಿದ್ದು ಈಗ 1600 ಆಗಿ ಮೂರು ಪಟ್ಟು ಹೆಚ್ಚಾಗಿದೆ. ಆದರೆ ಇವರಿಗೆ ಸರ್ಕಾರ ವಿದ್ಯಾರ್ಥಿ ವೇತನ ನೀಡಿಲ್ಲ ಎಂದು ಬಳ್ಳಾರಿ ಜಿಲ್ಲಾ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾಧ್ಯಕ್ಷ ಮುನಿರಾಜು ಎಂ. ಆರೋಪಿಸಿದ್ದಾರೆ.

dsdsd
ಮುನಿರಾಜು ಆರೋಪ

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಿಎಚ್​ಡಿ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಿಲ್ಲ ಎಂದು ಜಿಲ್ಲಾ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಜಿಲ್ಲಾಧ್ಯಕ್ಷ ಮುನಿರಾಜು ಎಂ. ಆರೋಪಿಸಿದ್ದಾರೆ.

ಮುನಿರಾಜು ಆರೋಪ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಪತ್ರಿಕಾಭವದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನವಿಲ್ಲ, ಸಿಬ್ಬಂದಿಗೆ ಎಂಟು ತಿಂಗಳಿಂದ ವೇತನವಿಲ್ಲ. ಖಾಯಂ ಪ್ರಾಧ್ಯಾಪಕರಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ ಎಂದರು.

ಸರ್ಕಾರ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿಮೆ ನೀಡಿದೆ. ಬದಲಿಗೆ ಮರಾಠಿ, ಸಂಸ್ಕೃತಿ, ಹಿಂದಿ ಭಾಷೆಯ ಬೆಳವಣಿಗೆಗೆ‌ ನೂರಾರು ಕೋಟಿ ಅನುದಾನದ ಬಿಡುಗಡೆ ಮಾಡುತ್ತಿದೆ. ಸಂಶೋಧನೆ ಮಾಡಲು ಹಣಕಾಸಿನ ಸಹಾಯಧನ ಅಗತ್ಯವಾಗಿರುತ್ತದೆ. ಬೇರೆ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಶೋಧನೆ ಮಾಡಬೇಕಾದರೆ ಹಣದ ಅವಶ್ಯಕತೆ ಇದೆ. ಹಣ ಇಲ್ಲದ ಕಾರಣ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಹೇಳಿದರು.

ABOUT THE AUTHOR

...view details