ಕರ್ನಾಟಕ

karnataka

ಮೆಣಸಿನಕಾಯಿ ಬೆಳೆ ಮಧ್ಯೆ ಗಾಂಜಾ... ಪೊಲೀಸರಿಂದ ರೇಡ್

By

Published : Nov 6, 2020, 5:55 AM IST

ಮೆಣಸಿನಕಾಯಿ ಬೆಳೆ ಮಧ್ಯೆ ಬೆಳೆಸಿದ್ದ ಗಾಂಜಾ ಬೆಳೆಯನ್ನ ಪೊಲೀಸರು ವಶಕ್ಕೆ ಪಡೆದರು. ಸಿರಿಗೇರಿ ಗ್ರಾಮದಲ್ಲಿ ಈ ಘಟನೆ ನಡೆಯಿತು.

ganza-seize
ಗಾಂಜಾ ವಶ

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ರೈತನ ಹೊಲದಲ್ಲಿ ಮೆಣಸಿನಕಾಯಿ ಬೆಳೆಯ ಮಧ್ಯೆ ಬೆಳೆದಿದ್ದ ಗಾಂಜಾ ಬೆಳೆಯನ್ನ ಸಿರಿಗೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಸಿರಿಗೇರಿ ಗ್ರಾಮದ ಕೋಲಿ ಈರಣ್ಣ (48) ಅವರ ಹೊಲದಲ್ಲಿ ಗಾಂಜಾ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್​ಐ ಅಮರೇಗೌಡ, ಹೆಡ್​ಕಾನ್​ಸ್ಟೇಬಲ್ ಗಳಾದ ನವೀನ, ಬಸವರಾಜ, ಪಿಸಿಗಳಾದ‌ ಮಲ್ಲಿಕಾರ್ಜುನ, ಮಂಜುನಾಥ, ವಸಂತಕುಮಾರ, ಅಮರೇಶ ನೇತೃತ್ವದ ತಂಡ ದಾಳಿ ಕಾರ್ಯಾಚರಣೆ ನಡೆಸಿತು.

ಅಂದಾಜು 8 ಕೆ.ಜಿ. 300 ಗ್ರಾಂನಷ್ಟು ಗಾಂಜಾ ಗಿಡಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ರಮ ಗಾಂಜಾ ಬೆಳೆದ ಆರೋಪದಡಿ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details