ಕರ್ನಾಟಕ

karnataka

By

Published : Mar 24, 2019, 8:37 PM IST

ETV Bharat / state

ಬಿಸಿಲ ಝಳ: ಕಾಂಗ್ರೆಸ್​, ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಜ್ಜಿಗೆ ವಿತರಣೆ

ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್‌ ಕಾರ್ಯಕರ್ತರ ಸಭೆಗೆ ಹಾಜರಾಗುವ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಜ್ಜಿಗೆ ಹಾಗೂ ನೀರಿನ ಬಾಟಲ್ ವಿತರಣೆ ಮಾಡುವ ಮೂಲಕ ವಿಶೇಷ ಗಮನ ಸೆಳೆದರು.

ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಸಭೆ ಬಿಸಿಲಿನ‌ ಧಗೆ ತಣಿಸಲು ಕಾರ್ಯಕರ್ತರಿಗೆ  ಮಜ್ಜಿಗೆ ವಿತರಣೆ.

ಬಳ್ಳಾರಿ: ಗಡಿನಾಡು ಬಳ್ಳಾರಿ ಜಿಲ್ಲಾದ್ಯಂತ ಬಿಸಿಲಿನ ಧಗೆ ದಿನ ದಿಂದ ದಿನಕ್ಕೆ ಜೋರಾಗಿದೆ. ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್‌ ಕಾರ್ಯಕರ್ತರಿಗೆ ಕುಡಿಯಲು ಮಜ್ಜಿಗೆ ಹಾಗೂ ನೀರಿನ ಬಾಟಲ್ ನಿಡಲಾಯಿತು.

ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಸಭೆಬಿಸಿಲಿನ‌ ಧಗೆ ತಣಿಸಲು ಕಾರ್ಯಕರ್ತರಿಗೆ ಮಜ್ಜಿಗೆ ವಿತರಣೆ.

ಬಿಸಿಲಿನ ಧಗೆಯನ್ನ ತಣಿಸಲು ಜಿಲ್ಲೆಯ ಸಾರ್ವಜನಿಕರು ನೀರು, ಮಜ್ಜಿಗೆ ಹಾಗೂ ತಂಪು‌ ಪಾನೀಯಗಳ ಸೇವನೆಗೆ ಮೊರೆ ಹೋಗೋದು ಸರ್ವೇ ಸಾಮಾನ್ಯ. ಅದರ ಭಾಗವಾಗಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್‌ ಕಾರ್ಯಕರ್ತರ ಸಭೆಗೆ ಹಾಜರಾಗುವ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಜ್ಜಿಗೆ ಹಾಗೂ ನೀರಿನ ಬಾಟಲ್ ವಿತರಣೆ ಮಾಡುವ ಮುಖೇನ ವಿಶೇಷ ಗಮನ ಸೆಳೆದರು.


ABOUT THE AUTHOR

...view details