ಕರ್ನಾಟಕ

karnataka

ETV Bharat / state

ವಿಜಯದಶಮಿಯಂದು ಸಾವಿನಲ್ಲೂ ಒಂದಾದ ರೈತ ದಂಪತಿ! - ಪತಿ ಸಾವಿನಿಂದ ಪತ್ನಿ ಸಾವು

ರೈತಾಪಿ ಕುಟುಂಬದ ದಂಪತಿ ಒಂದೇ ದಿನ ಇಹಲೋಕ ತ್ಯಜಿಸಿದ ಘಟನೆ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ.

ಸಾವಿನಲ್ಲೂ ಒಂದಾದ ರೈತ ದಂಪತಿ

By

Published : Oct 8, 2019, 11:15 PM IST

ಬಳ್ಳಾರಿ:ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿಂದು ರೈತಾಪಿ ಕುಟುಂಬದ ದಂಪತಿ ಒಂದೇ ದಿನ ಸಾವನ್ನಪ್ಪಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.

ವಿಜಯದಶಮಿ ಸಂಭ್ರಮದಲ್ಲಿದ್ದ ಇಡೀ ಶ್ರೀಧರಗಡ್ಡೆ ಗ್ರಾಮವೇ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಗ್ರಾಮದ ಕೊಟ್ಟೂರುಸ್ವಾಮಿ ಮಠದ ಬಳಿಯ ನಿವಾಸಿ ಕಟ್ಟೆಬಸಪ್ಪ (60) ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ನಂತರ ಪತಿಯ ಸಾವಿನ ದುಃಖ ತಾಳಲಾಗದೇ ಪತ್ನಿ ಈರಮ್ಮ(52) ಕೂಡ ಪ್ರಾಣ ಬಿಟ್ಟಿದ್ದಾರೆ.

ಹಲವು ದಿನಗಳಿಂದ ಪತಿ ಕಟ್ಟೆಬಸಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೊನೆಯುಸಿರೆಳಿದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಪತಿಯ ಶವಮುಂದೆ ರೋಧಿಸುತ್ತಿದ್ದ ಪತ್ನಿ ಈರಮ್ಮ ಅಳುತ್ತಲೇ ಪ್ರಾಣ ಬಿಟ್ಟಿದ್ದಾರೆ.

ABOUT THE AUTHOR

...view details