ಬೆಳಗಾವಿ: ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಈ ವಿವಾದ ಕುರಿತು ಇಂದು ನಡೆದ ಘಟನೆ ಸಂಫೂರ್ಣ ಟೈಮ್ ಲೈನ್ ಇಲ್ಲಿದೆ.
- ಮಧ್ಯರಾತ್ರಿ 2.30ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ
- ಮಧ್ಯರಾತ್ರಿ 3 ಗಂಟೆಗೆ ಸ್ಥಳೀಯ ಪೊಲೀಸರ ಆಗಮನ
- ಬೆಳಗ್ಗೆ 5.30ಕ್ಕೆ ಸ್ಥಳೀಯ ಮರಾಠಿ ಯುವಕರ ಆಗಮನ, ಪೊಲೀಸರ ಜೊತೆ ವಾಗ್ವಾದ
- ಬೆಳಗ್ಗೆ 6.30ಕ್ಕೆ ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೆ ಯತ್ನ
- ಬೆಳಗ್ಗೆ 6.35ಕ್ಕೆ ಶಿವಾಜಿ ಪ್ರತಿಮೆ ವಶಕ್ಕೆ ಪಡೆದ ಪೊಲೀಸರು
- ಬೆಳಗ್ಗೆ 7 ಗಂಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಶುರು ಮಾಡಿದ ಮರಾಠಿ ಯುವಕರು
- ಬೆಳಗ್ಗೆ 7.30ಕ್ಕೆ ಶಿವಾಜಿ ಪ್ರತಿಮೆ ಬಳಿ ಜಮಾವಣೆಗೊಂಡ ಮರಾಠಿ ಯುವಕರು
- ಬೆಳಗ್ಗೆ 8 ಗಂಟೆಗೆ ಕನ್ನಡಪರ ಸಂಘಟನೆಗಳ ಮುಖಂಡರ ಆಗಮನ
- ಬೆಳಗ್ಗೆ 8.30ಕ್ಕೆ ರಾಯಣ್ಣ ಪ್ರತಿಮೆ ಬಳಿ ಒಂದೆಡೆ ಕನ್ನಡಪರ ಸಂಘಟನೆಗಳು ಮತ್ತೊಂದೆಡೆ ಮರಾಠಿ ಭಾಷಿಕ ಯುವಕರ ಜಮಾವಣೆ
- ಬೆಳಗ್ಗೆ 8.45ಕ್ಕೆ ಸ್ಥಳದಲ್ಲಿ ಬಿಗುವಿನ ವಾತಾವರಣ, ಸ್ಥಳಕ್ಕೆ ಒಂದು ಸಿಎಆರ್, ಡಿಎಆರ್ ತುಕಡಿ ದೌಡು
- ಬೆಳಗ್ಗೆ 8.50ಕ್ಕೆ ಸ್ಥಳಕ್ಕೆ ಡಿಸಿಪಿ ಶೀಮಾ ಲಾಟ್ಕರ್ ಭೇಟಿ, ಮರಾಠಿ ಸಂಘಟನೆಗಳ ಮುಖಂಡರಿಗೆ ತರಾಟೆ
- ಬೆಳಗ್ಗೆ 9 ಗಂಟೆಗೆ ಶಿವಾಜಿ ಪ್ರತಿಮೆ ಬಳಿ ಜಮಾವಣೆಗೊಂಡ 200ಕ್ಕೂ ಹೆಚ್ಚು ಮರಾಠಿ ಭಾಷಿಕ ಯುವಕರು, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಭೇಟಿ
- ಬೆಳಗ್ಗೆ 9.30ಕ್ಕೆ ಜಮಾವಣೆಗೊಂಡ ಮರಾಠಿ ಭಾಷಿಕರ ಮನವೊಲಿಕೆಗೆ ನಗರ ಪೊಲೀಸ್ ಆಯುಕ್ತರ ಯತ್ನ, ಧರಣಿನಿರತರಿಗೆ ಶೀಮಾ ಲಾಟ್ಕರ್ ಬುದ್ಧಿವಾದ
- ಬೆಳಗ್ಗೆ 9.58 ಶಿವಾಜಿ ಪ್ರತಿಮೆ ಇರೋ ಪಕ್ಕದ ರಸ್ತೆಯಲ್ಲಿ ಬೃಹತ್ ರಾಯಣ್ಣ ಧ್ವಜ ಹಿಡಿದು ಬೈಕ್ ಮೇಲೆ ತೆರಳುತ್ತಿದ್ದ ಯುವಕರು
- ಬೆಳಗ್ಗೆ 10 ಗಂಟೆಗೆ ಕೆಲ ಕಿಡಿಗೇಡಿಗಳಿಂದ ಕಲ್ಲು ತೂರಾಟ, ಲಘು ಲಾಠಿ ಪ್ರಹಾರ
- ಬೆಳಗ್ಗೆ 10.30ಕ್ಕೆ ಕಿಡಿಗೇಡಿಗಳನ್ನು ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದ ಪೊಲೀಸರು
- ಬೆಳಗ್ಗೆ 10.48ಕ್ಕೆ ಲಾಠಿ ಚಾರ್ಜ್ ಸೇರಿದಂತೆ ಘಟನೆ ಕುರಿತು ಹೇಳಿಕೆ
- ಬೆಳಗ್ಗೆ 11.30ಕ್ಕೆ ಪರಿಸ್ಥಿತಿ ಹತೋಟೆಗೆ ತರಲು ಪೀರನವಾಡಿ ಗ್ರಾಮದಲ್ಲಿ ಪೊಲೀಸರಿಂದ ರೌಂಡ್ಸ್
- ಮಧ್ಯಾಹ್ನ 12ಕ್ಕೆ ಶಿವಾಜಿ ಮೂರ್ತಿ ಬಳಿ ನಡೆದ ಲಾಠಿ ಚಾರ್ಜ್ ಆಗಿರುವ ಸ್ಥಳದಲ್ಲಿ ಚೆನ್ನಮ್ಮ ಪಡೆಯಿಂದ ಭದ್ರತೆ