ಚಿಕ್ಕೋಡಿ/ಬೆಳಗಾವಿ: ಕಾಗವಾಡ ಉಪಚುನಾವಣೆ ಹಿನ್ನೆಲೆ ಇಂದು ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಬಿಜೆಪಿ ಬಹಿರಂಗ ಸಭೆ ನಡೆಸಲಾಯ್ತು. ಅಭ್ಯರ್ಥಿ ಶ್ರೀಮಂತ ಪಾಟೀಲ್ ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಈ ವೇಳೆ ಶ್ರೀಮಂತ ಪಾಟೀಲರ ಪರ ಬಿಜೆಪಿ ನಾಯಕರು ಪ್ರಚಾರ ಮಾಡಿದ್ರು.
ಉಗಾರದಲ್ಲಿ ಬಹಿರಂಗ ಸಭೆ: ಶ್ರೀಮಂತ ಪಾಟೀಲ್ ಸೇರಿ ಬಿಜೆಪಿ ನಾಯಕರು ಭಾಗಿ - srimantha patil attend bjp programme in chikkodi
ಬಿಜೆಪಿ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಶ್ರೀಮಂತ ಪಾಟೀಲ್ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಉಗಾರ ಗ್ರಾಮದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಕಮಲ ನಾಯಕರು, ಶ್ರೀಮಂತ ಪಾಟೀಲ್ ಪರ ಮತಯಾಚನೆ ಮಾಡಿದ್ರು.

ಶ್ರೀಮಂತ ಪಾಟೀಲ್ ಬಿಜೆಪಿ ಸೇರಿದ ಬಳಿಕ ಮೊದಲನೆ ಬಿಜೆಪಿ ಕಾರ್ಯಕ್ರಮ
ಶ್ರೀಮಂತ ಪಾಟೀಲ್ ಬಿಜೆಪಿ ಸೇರಿದ ಬಳಿಕ ಮೊದಲನೆ ಬಿಜೆಪಿ ಕಾರ್ಯಕ್ರಮ
ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಪಿ ರಾಜೀವ್, ಡಿಎಂ ಐಹೊಳೆ, ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಸ್ಥಳೀಯ ನಾಯಕರು ಭಾಗಿಯಾಗಿ ಕಾರ್ಯಕರ್ತರ ಸಭೆ ಉದ್ಘಾಟಿಸಿ, ಶ್ರೀಮಂತ ಪಾಟೀಲ್ ಪರ ಮತಯಾಚಿಸಿದ್ರು.