ಕರ್ನಾಟಕ

karnataka

By

Published : Mar 3, 2023, 6:13 PM IST

ETV Bharat / state

ಪ್ರಿಯಾಂಕ್​ ಖರ್ಗೆಗೆ ದರ್ಪ ಇರುವುದರಿಂದ ಆಹ್ವಾನ ಕೊಡುತ್ತಾರೆ: ಪಿ.ರಾಜೀವ್​

ವಿಧಾನಸಭಾ ಚುನಾವಣೆಗೆ ಕುಡಚಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಶಾಸಕ ಪಿ ರಾಜೀವ್​ ಹೇಳಿದ್ದು, ಈ ಮೂಲಕ ಕ್ಷೇತ್ರ ಬದಲಾವಣೆ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಚುನಾವಣೆಗೆ ಸ್ಪರ್ಧಿಸಲಿರುವ ಕ್ಷೇತ್ರದ ಬಗ್ಗೆ ರಾಜೀವ್​ ಹೇಳಿಕೆ

ಶಾಸಕ ಪಿ. ರಾಜೀವ್​
ಶಾಸಕ ಪಿ. ರಾಜೀವ್​

ಶಾಸಕ ಪಿ.ರಾಜೀವ್​ ಹೇಳಿಕೆ

ಚಿಕ್ಕೋಡಿ (ಬೆಳಗಾವಿ): ಕುಡಚಿ ಕ್ಷೇತ್ರ ತೊರೆಯುತ್ತೇನೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಅಂತಹ ಸಂದರ್ಭ ಬಂದರೆ, ನಾನು ನನ್ನ ಕುಟುಂಬಕ್ಕೆ ಮೋಸ ಮಾಡಬಹುದು, ಆದರೆ ಕುಡಚಿ ಮತಕ್ಷೇತ್ರ ಜನರನ್ನು ಮೋಸ ಮಾಡುವುದಿಲ್ಲ, ನಾನು ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದಲೇ ಸ್ಪರ್ದೆ ಮಾಡುತ್ತೇನೆ ಎಂದು ಕುಡಚಿ ಶಾಸಕ ಪಿ ರಾಜೀವ್ ಕ್ಷೇತ್ರ ಬದಲಾವಣೆ ಊಹಾಪೋಹಗಳಿಗೆ ತೆರೆ ಎಳೆದರು.

ರಾಯಭಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಕುಡಚಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಪಿ ರಾಜೀವ್ ಮಾತನಾಡಿ, ನಾನು ಕುಡಚಿ ಕ್ಷೇತ್ರ ತೋರೆಯುತ್ತೆನೆ ಎಂದು, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿವೆ. ನನ್ನನ್ನು ಕೈ ಹಿಡಿದ ಮತಕ್ಷೇತ್ರದ ಜನರನ್ನು ನಾನು ಬಿಟ್ಟು ಹೋಗುವುದಿಲ್ಲ, ಸಾಯುವ ಕೊನೆ ಕ್ಷಣದವರಿಗೆ ನಿಮ್ಮನ್ನು ನೆನೆಸಿಕೊಂಡು ಪ್ರಾಣ ಬಿಡುತ್ತೇನೆ, ಹೊರತಾಗಿ ನಿಮ್ಮ ಸೇವೆಯಿಂದ ದೂರ ಹೋಗಲ್ಲ ಎಂದು ಶಾಸಕ ಪಿ ರಾಜೀವ್ ಮಾರ್ಮಿಕವಾಗಿ ನುಡಿದರು.

ನಂತರದ ಮಾದ್ಯಮ ಜೊತೆ ಮಾತನಾಡಿ, ಭಾರತಿ ಜನತಾ ಪಕ್ಷದ ಎಂದರೆ ಅದು ಶಿಸ್ತು ಹೊಂದಿರುವ ಪಕ್ಷ. ನಾನು ಶಿಸ್ತಿನ ಸಿಪಾಯಿ ಆಗಿದ್ದರಿಂದ ಏನು ಹೇಳಿಕೆ ಕೊಡಬೇಕು ಅದನ್ನು ಕೊಡ್ತಾ ಬಂದಿದ್ದೇನೆ. ಆದರೆ, ನಾನು ಸ್ಪರ್ಧೆ ಮಾಡುವುದು ಕುಡಚಿ ಮತಕ್ಷೇತ್ರ ನಾನು ಎಲ್ಲಿಯೂ ಇಂತಹ ಕಡೆಯಿಂದ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿಲ್ಲ ಎಂದು ಪ್ರತಿಕ್ರಿಯಿಸಿದರು.

ಪ್ರಿಯಾಂಕ ಖರ್ಗೆ ವಿರುದ್ಧ ಪಿ ರಾಜೀವ್ ಆಕ್ರೋಶ : ದೊಡ್ಡವರು ದರ್ಪ ಇರುವವರು, ಚುನಾವಣೆ ಸ್ಪರ್ಧೆಗೆ ನಮ್ಮಂತವರಿಗೆ ಆಹ್ವಾನ ಕೊಡುತ್ತಿರುತ್ತಾರೆ. ಆಹ್ವಾನಗಳಿಗೆ ಅಲ್ಲಿನ ಜನತೆಯ ತಕ್ಕ ಉತ್ತರ ಕಲಿಸುತ್ತಾರೆ. ಚಿತ್ತಾಪುರವನ್ನು ಎದುರಿಸಲಿಕ್ಕೆ ನಮ್ಮ ಬಿಜೆಪಿ ಅಭ್ಯರ್ಥಿ ಸಮರ್ಥರಾಗಿದ್ದಾರೆಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಪಿ ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.

ಹೈಕಮಾಂಡ್ ಹೇಳಿದ್ರೆ ಬೇರೆ ಕಡೆಯಿಂದ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಳೆದ 15 ವರ್ಷದಿಂದ ಕುಡಚಿ ಮತಕ್ಷೇತ್ರದಲ್ಲಿದ್ದೆನೆ ಸದ್ಯಕ್ಕೆ ಆತರದ ಯಾವುದೇ ಆಲೋಚನೆಗಳಿಲ್ಲ. ಕುಡಚಿ ಕ್ಷೇತ್ರದಲ್ಲಿ ಪ್ರತಿಯೊಂದು ಮನೆಗೆ ಮನೆ ಮಗನಾಗಿ ಸಂಬಂಧಗಳನ್ನು ಬೆಳೆಸಿಕೊಂಡಿದ್ದೇನೆ. ಹಾಗಾಗಿ ಕುಡಚಿ ಇಂದಲೇ ನಾನು ಶಾಸಕನಾಗುತ್ತೇನೆ ಎಂದು ಶಾಸಕರು ಸ್ಪಷ್ಟಪಡಿಸಿದರು.

ಬೇರೆ ಕಡೆ ಸ್ಪರ್ಧೆ ಮಾಡುತ್ತೇನೆ ಎಂಬುದು ಊಹಾಪೋವ ಅಷ್ಟೇ: ಭಾರತಿ ಜನತಾ ಪಕ್ಷ ನನಗೆ ಹಲವಾರು ಜವಾಬ್ದಾರಿಗಳನ್ನು ನೀಡಿದೆ. ಕಲಬುರ್ಗಿ ಜಿಲ್ಲೆಯ ತಾಂಡಾ ಸಮುದಾಯದ ಜನರಿಗೆ 51 ಸಾವಿರ ಹಕ್ಕು ಪತ್ರ ಕೊಡುವುದಕ್ಕೆ ಸಮಯ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮನದಿಂದ ನಾನು ಸತತವಾಗಿ ಒಂದು ತಿಂಗಳು ಆ ಕ್ಷೇತ್ರದಲ್ಲಿ ಉಳಿದಿದ್ದೆ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ಕೂಡ ಆಗಿತ್ತು.

ಆದರೆ, ಕಲಬುರ್ಗಿ ಚಿತ್ತಾಪುರ್​ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಪಿ ರಾಜೀವ್​ ಅವರು ಅಲ್ಲಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ಊಹಾಪೋಗಳು ಕೇಳಿ ಬರುತ್ತಿದ್ದವು ಜೊತೆಗೆ ವಿಜಯಪುರದ ಸಹ ಪ್ರಭಾರಿ ಆಗಿದ್ದರಿಂದ ವಿಜಯಪುರಕ್ಕೆ ಪ್ರತಿ ತಿಂಗಳು ಭೇಟಿ ಕೊಡುವುದರಿಂದ ಅವಾಗ ನಾಗಠಾಣದಿಂದ ಸ್ಪರ್ಧೆ ಮಾಡುತ್ತಾರೆಂದು ಚರ್ಚೆಗಳು ಕೇಳಿ ಬಂದವು.

ನಂತರ ನಮ್ಮೂರು ಹುಟ್ಟೂರಾದ ಗದಗಕ್ಕೆ ಬೇಟಿ ಕೊಟ್ಟಾಗ ಶಿರಹಟ್ಟಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಗಳು ಹಬ್ಬಿದವು, ಅವು ಯಾವು ಇಲ್ಲ ಎಲ್ಲವೂ ಊಹಾಪೋಹ. ನಾನು ಕುಡಚಿ ಮತಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಶಾಸಕ ಪಿ ರಾಜೀವ್​ ಕುಡಚಿ ಕ್ಷೇತ್ರದ ಜನರಿಗೆ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ:ಶಾಸಕನ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ: ಇದು ಒಂದು ಸಣ್ಣ ರೇಡ್​: ಸಚಿವ ಸಿಸಿ ಪಾಟೀಲ್

ABOUT THE AUTHOR

...view details