ಕರ್ನಾಟಕ

karnataka

ETV Bharat / state

ನಕ್ಸಲರ ಅಟ್ಟಹಾಸ.. ಬೆಳಗಾವಿ ಮೂಲದ ಬಿಎಸ್ಎಫ್ ಯೋಧ ಹುತಾತ್ಮ

ನಕ್ಸಲರು ನಡೆಸಿದ ಅಪ್ರಚೋದಿತ ಗುಂಡಿನ‌ ದಾಳಿಗೆ ಬೆಳಗಾವಿ ಮೂಲದ ಯೋಧನೋರ್ವ ಹುತಾತ್ಮ.

By

Published : Mar 17, 2019, 5:35 PM IST

ಪಶ್ಚಿಮ‌ ಬಂಗಾಳದಲ್ಲಿ ನಕ್ಸಲರ ಅಟ್ಟಹಾಸ ಬೆಳಗಾವಿ ಮೂಲದ ಬಿಎಸ್ಎಫ್ ಯೋಧ ಹುತಾತ್ಮ

ಬೆಳಗಾವಿ: ನಕ್ಸಲರು ನಡೆಸಿದ ಅಪ್ರಚೋದಿತ ಗುಂಡಿನ‌ ದಾಳಿಗೆ ಬೆಳಗಾವಿ ಮೂಲದ ಯೋಧ ಹುತಾತ್ಮರಾಗಿದ್ದಾರೆ. ಖಾನಾಪುರ ತಾಲೂಕಿನ ‌ನಾವಗಾ ಗ್ರಾಮದ ರಾಹುಲ್ ವಸಂತ ಶಿಂಧೆ (26) ಹುತಾತ್ಮ ಯೋಧ.

ಪಶ್ಚಿಮ‌ ಬಂಗಾಳದಲ್ಲಿ ನಕ್ಸಲರ ಅಟ್ಟಹಾಸ ಬೆಳಗಾವಿ ಮೂಲದ ಬಿಎಸ್ಎಫ್ ಯೋಧ ಹುತಾತ್ಮ

ಪಶ್ಚಿಮ‌ ಬಂಗಾಳದ ಬಿಎಸ್ಎಫ್ ವಿಭಾಗದಲ್ಲಿ ರಾಹುಲ್ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ‌ ಬೆಳಗ್ಗೆ ಹೆಡ್ ಕ್ವಾರ್ಟರ್ಸ್ಗೆ ತೆರಳುತ್ತಿದ್ದ ಸಮಯದಲ್ಲಿ ಬಿಎಸ್ಎಫ್ ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಪಿನಲ್ಲಿದ್ದ ರಾಹುಲ್ ಶಿಂಧೆ ಕೂಡ ಹುತಾತ್ಮರಾಗಿದ್ದಾರೆ.

ಸೋಮವಾರ ಸಂಜೆ ಗೋವಾ ಮಾರ್ಗವಾಗಿ ಹುತಾತ್ಮ ಯೋಧನ‌ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರಲಿದೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.


For All Latest Updates

ABOUT THE AUTHOR

...view details