ಕರ್ನಾಟಕ

karnataka

ಹಫ್ತಾ ನೀಡುವಂತೆ ವೈದ್ಯೆಗೆ ಜೀವಬೆದರಿಕೆ ಪ್ರಕರಣ: ಕಿತ್ತೂರು ಪಟ್ಟಣ ಬಂದ್​​​

By

Published : May 14, 2020, 6:33 PM IST

ಜಿಲ್ಲೆಯ ಕಿತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅನ್ನಪೂರ್ಣ ಅಂಗಡಿ ಎಂಬುವವರಿಗೆ ಅದೇ ಪಟ್ಟಣದ ಅಬ್ದುಲ್ ಮುಜಾವರ್ ಹಾಗೂ ಸ್ನೇಹಿತರು ಹಫ್ತಾ ನೀಡುವಂತೆ ಜೀವಬೆದರಿಕೆ ಹಾಕಿದ್ದರು. ಇದೀಗ ಆರೋಪಿಯನ್ನು ಬಂಧಿಸಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

Life threatening for doctor: complete Kittur town was closed by people
ಹಫ್ತಾ ನೀಡುವಂತೆ ವೈದ್ಯೆಗೆ ಜೀವ ಬೆದರಿಕೆ: ಕಿತ್ತೂರು ಪಟ್ಟಣ ಸಂಪೂರ್ಣ ಬಂದ್​

ಕಿತ್ತೂರು (ಬೆಳಗಾವಿ):ಸರ್ಕಾರಿ ವೈದ್ಯೆಗೆ ಹಫ್ತಾ ನೀಡುವಂತೆ ಜೀವಬೆದರಿಕೆ ಹಾಕಿದ್ದ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಿತ್ತೂರು ಪಟ್ಟಣದ ಜನತೆ ಸ್ವಯಂ ಪ್ರೇರಿತವಾಗಿಯೇ ಅಂಗಡಿ ಮುಂಗಟುಗಳನ್ನು ಬಂದ್ ಮಾಡಿ ವೈದ್ಯೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕಿತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಅನ್ನಪೂರ್ಣ ಅಂಗಡಿ ಎಂಬುವವರಿಗೆ ಅದೇ ಪಟ್ಟಣದ ಅಬ್ದುಲ್ ಮುಜಾವರ್ ಹಾಗೂ ಆತನ ಸ್ನೇಹಿತರು ಹಪ್ತಾ ನೀಡುವಂತೆ ಜೀವಬೆದರಿಕೆ ಹಾಕಿದ್ದರು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಡಾ. ಅನ್ನಪೂರ್ಣ ಈ ಕುರಿತು ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಬ್ದುಲ್ ಮುಜಾವರ್ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವೈದ್ಯೆಗೆ ಧೈರ್ಯ ತುಂಬಬೇಕಾದ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಘಟನೆ ಬಳಿಕವೂ ಗಮನ ಹರಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರಿಂದ ಆಕ್ರೋಶಗೊಂಡ ವೈದ್ಯರು, ಅರೋಪಿ ಅಬ್ದುಲ್ ಮುಜಾವರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇನ್ನು ಬಂದ್​​ಗೆ ಸಾರ್ವಜನಿಕರು, ತಾಲೂಕಿನ ಎಲ್ಲಾ ಅಂಗಡಿಗಳು ಹಾಗೂ ಖಾಸಗಿ ವೈದ್ಯರ ಸಂಘ ಮತ್ತು ಕಿತ್ತೂರು ಪಟ್ಟಣದ ‌ವರ್ತಕರ ಸಂಘ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳು ಬೆಂಬಲ ನೀಡುವ ಮೂಲಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ABOUT THE AUTHOR

...view details