ಕರ್ನಾಟಕ

karnataka

By

Published : Mar 8, 2021, 2:50 PM IST

Updated : Mar 8, 2021, 3:15 PM IST

ETV Bharat / state

ಧಾರವಾಡ-ಕಿತ್ತೂರು-ಬೆಳಗಾವಿಗೆ ಹೊಸ ರೈಲು ಮಾರ್ಗಕ್ಕೆ ಅಸ್ತು: ನನಸಾದ ಸುರೇಶ್​ ಅಂಗಡಿ ಕನಸು

ಆರ್ಥಿಕ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಇಂದು 2021ರ ಬಜೆಟ್​ ಮಂಡಿಸಿದ್ದು, ನಿಧನರಾಗಿರುವ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಕನಸನ್ನು ನನಸು ಮಾಡುವಲ್ಲಿ ಸಫಲರಾಗಿದ್ದಾರೆ.

Karnataka Budget Live: CM BS Yediyurappa present State Budget
ಸಂಗ್ರಹ ಚಿತ್ರ

ಬೆಂಗಳೂರು/ಬೆಳಗಾವಿ: ಜಗತ್ತನ್ನು ಕಾಡಿದ ಮಹಾಮಾರಿ ಕೊರೊನಾ ಸಾಂಕ್ರಾಮಿಕ ತಂದೊಡ್ದಿದ ಕಠಿಣ ಸವಾಲು ಹಾಗೂ ಪ್ರಾಕೃತಿಕ ವಿಕೋಪದಂತಹ ಸರಣಿ ಸಮಸ್ಯೆಗಳು ಕರ್ನಾಟಕದ ಆರ್ಥಿಕತೆಯ ತಳಪಾಯ ಅಲುಗಾಡಿಸಿದವು. ಇಂತಹ ಜಟಿಲತೆಯ ನಡುವೆಯೂ ಮುಖ್ಯಮಂತ್ರಿ ಬಿ ಎಸ್​​ ಯಡಿಯೂರಪ್ಪ ಅವರು ತಮ್ಮ 8ನೇ ರಾಜ್ಯ ಬಜೆಟ್​ ಮಂಡಿಸಿದರು.

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ

ಧಾರವಾಡ-ಕಿತ್ತೂರು-ಬೆಳಗಾವಿಗೆ ಹೊಸ ರೈಲು ಮಾರ್ಗ ನಿರ್ಮಿಸಲು ₹927 ಕೋಟಿ ಅನುದಾನ ನೀಡುವ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್​ ಅಂಗಡಿ ಅವರ ಕನಸನ್ನು ನನಸು ಮಾಡುವಲ್ಲಿ ಸಫಲರಾಗಿದ್ದಾರೆ. ಇದರ ಜೊತೆಗೆ, ರೈಲು ಮಾರ್ಗಗಳ ಅಭಿವೃದ್ಧಿಗೆ ₹3,991 ಕೋಟಿ ಘೋಷಣೆ ಸಹ ಮಾಡಿದ್ದಾರೆ. ರೈಲು ಮಾರ್ಗಗಳ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ ₹2,630 ಕೋಟಿ ಒದಗಿಸಲಾಗುವುದು ಎಂದು ಸಿಎಂ ಬಜೆಟ್​ನಲ್ಲಿ ಘೋಷಿಸಿದ್ದಾರೆ.

ಸುರೇಶ್​ ಅಂಗಡಿ (ಸಂಗ್ರಹ ಚಿತ್ರ)

ಧಾರವಾಡ-ಕಿತ್ತೂರು-ಬೆಳಗಾವಿ ನುಡುವಿನ ಸುಮಾರು 73 ಕಿ.ಮೀ ಉದ್ದದ ಹೊಸ ರೈಲು ಮಾರ್ಗ ಅಭಿವೃದ್ಧಿ ಮಾಡುವುದು ಸುರೇಶ್ ಅಂಗಡಿ ಅವರ ಕನಸಾಗಿತ್ತು. ಸಿಎಂ ಇಂದಿನ ತಮ್ಮ ಬಜೆಟ್​ನಲ್ಲಿ ಅವರ ಒತ್ತಾಸೆಯ ಫಲವಾಗಿ ₹ 927 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭ ಮಾಡುವುದಾಗಿ ಘೋಷಿಸಿದ್ದಾರೆ.

Last Updated : Mar 8, 2021, 3:15 PM IST

ABOUT THE AUTHOR

...view details