ಕರ್ನಾಟಕ

karnataka

ETV Bharat / state

ಹತಾಶೆಗೊಳಗಾಗದೆ ಪಕ್ಷ ಸಂಘಟನೆ ಮಾಡುತ್ತೇವೆ: ವೈಎಸ್​ವಿ ದತ್ತಾ

ದೇವೇಗೌಡರು ಸೇರಿದಂತೆ ಸುಮಾರು ಬಾರಿ ನಾವು ಸೋತು, ಮತ್ತೆ ಗೆದ್ದು ಬಂದಿದ್ದೇವೆ. ಮುಂದೆ  ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಹತಾಶೆ  ಏನೂ ಇಲ್ಲ. ಪಕ್ಷ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ ಎಂದು ವಿಶ್ವಾಸ  ವ್ಯಕ್ತಪಡಿಸಿದ್ದಾರೆ.

By

Published : May 23, 2019, 8:13 PM IST

ಮಾಜಿ ವಿಧಾನಪರಿಷತ್ ಸದಸ್ಯ ವೈ.ಎಸ್.ವಿ ದತ್ತಾ

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲು ಜೆಡಿಎಸ್​ಗೆ ಹೊಸದಲ್ಲ. ನಾವು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗಿದ್ದೇವೆ. ಬಿದ್ದಾಗ ಬೇಜಾರಾಗಿಲ್ಲ, ಗೆದ್ದಾಗ ಹಿಗ್ಗದೆ ಮುಂದೆ ಸಾಗಿದ್ದೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ ದತ್ತಾ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದ ಮಟ್ಟಿಗೆ ಮೈತ್ರಿ ಪಕ್ಷಗಳು ಸಮನ್ವಯದಿಂದ ಕೆಲಸ ಮಾಡಿವೆ. ‌ಈಗಿನ ಯಾವುದೋ ಒಂದು ಟ್ರೆಂಡ್ ನೋಡಿಕೊಂಡು ಜನ ತೀರ್ಮಾನ ಮಾಡಿದ್ದಾರೆ‌. ಬಿಜೆಪಿ ಕೂಡ ನಿರೀಕ್ಷೆ ಮಾಡಿದಷ್ಟು ಸೀಟುಗಳನ್ನು ಗೆದ್ದಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎಸ್.ವಿ ದತ್ತಾ

ದೇವೇಗೌಡರು ಸೇರಿದಂತೆ ಸುಮಾರು ಬಾರಿ ನಾವು ಸೋತು, ಮತ್ತೆ ಗೆದ್ದು ಬಂದಿದ್ದೇವೆ. ಮುಂದೆ ಪಕ್ಷವನ್ನು ಹೇಗೆ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಹತಾಶೆ ಏನೂ ಇಲ್ಲ. ಪಕ್ಷ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ ಬೆಳಗ್ಗೆ 12.30ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಸಂಜೆ 4 ಗಂಟೆಗೆ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details