ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ವೀರ ಸಾವರ್ಕರ್​ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದ ವೀರ್​ ಸಾವರ್ಕರ್​ ಮೇಲ್ಸೇತುವೆ ಕೊನೆಗೂ ಉದ್ಘಾಟನೆ ಆಗಿದೆ. ಮುಖ್ಯ‌ಮಂತ್ರಿ ಯಡಿಯೂರಪ್ಪ ಅವರು ಟೇಪ್ ಕತ್ತರಿಸುವ ಮೂಲಕ ಯಲಹಂಕದ ವೀರ ಸಾವರ್ಕರ್​ ಮೇಲ್ಸೇತುವೆ ಉದ್ಘಾಟಿಸಿದರು.

By

Published : Sep 8, 2020, 2:05 PM IST

Updated : Sep 8, 2020, 3:14 PM IST

ಯಲಹಂಕದ ವೀರ ಸಾರ್ವಕರ್ ಮೇಲ್ಸೇತುವೆ ಉದ್ಘಾಟನೆ
ಯಲಹಂಕದ ವೀರ ಸಾರ್ವಕರ್ ಮೇಲ್ಸೇತುವೆ ಉದ್ಘಾಟನೆ

ಯಲಹಂಕ (ಬೆಂಗಳೂರು):ಯಲಹಂಕದ ವೀರ ಸಾವರ್ಕರ್​ ಮೇಲ್ಸೇತುವೆಯನ್ನು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ.

ಯಲಹಂಕದ ಡೈರಿ ಸರ್ಕಲ್ ಬಳಿಯ ಮೇಜರ್ ಉನ್ನಿಕೃಷ್ಣನ್ ರಸ್ತೆಯಲ್ಲಿ 34 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮೇಲ್ಸೇತುವೆಗೆ ವೀರ ಸಾವರ್ಕರ್​ ಎಂದು ನಾಮಕರಣ ಮಾಡಲಾಗಿತ್ತು. ಬಿಬಿಎಂಪಿ ವೀರ ಸಾವರ್ಕರ್​ ಹೆಸರಿಗೆ ಅನುಮೋದನೆ ಸಹ ನೀಡಿತ್ತು. ಆದರೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ವೀರ ಸಾವರ್ಕರ್​ ನಾಮಕರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಮುಂಡಲಾಗಿತ್ತು. ಬಳಿಕ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ನಿಧನ ಹಿನ್ನೆಲೆ ಕಾರ್ಯಕ್ರಮ ಮುಂದೂಡಲಾಯಿತು. ಮೂರನೇ ಬಾರಿ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಉದ್ಘಾಟನೆ ನೆರವೇರಿಸಿದ್ದಾರೆ.

ವೀರ ಸಾವರ್ಕರ್​ ಮೇಲ್ಸೇತುವೆ ಉದ್ಘಾಟನೆ

ವೀರ ಸಾವರ್ಕರ್​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮುಖ್ಯ‌ಮಂತ್ರಿ ಯಡಿಯೂರಪ್ಪ, ಟೇಪ್ ಕತ್ತರಿಸುವ ಮೂಲಕ ಮೇಲ್ಸೇತುವೆ ಉದ್ಘಾಟಿಸಿದರು. ಕಾರ್ಯಕ್ರಯದಲ್ಲಿ ಡಿಸಿಎಂ ಅಶ್ವತ್ಥ್​ ನಾರಾಯಣ, ಸಚಿವರಾದ ಬೈರತಿ ಬಸವರಾಜ್, ಸಿ ಟಿ ರವಿ ಮತ್ತು ಸ್ಥಳೀಯ ಶಾಸಕರು, ಮುಖ್ಯಮಂತ್ರಿ‌ಗಳ ರಾಜಕೀಯ ಕಾರ್ಯದರ್ಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಯಲಹಂಕದ ವೀರ ಸಾವರ್ಕರ್ ಸೇತುವೆ ಉದ್ಘಾಟನೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಯಲಹಂಕ ಕ್ಷೇತ್ರ ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣ ಹಾಗೂ ಶ್ರೀಧರ್ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರನ್ನ ಪೊಲೀಸರು ಗೃಹಬಂಧನಲ್ಲಿಸಿದರು.

Last Updated : Sep 8, 2020, 3:14 PM IST

ABOUT THE AUTHOR

...view details