ಕರ್ನಾಟಕ

karnataka

By

Published : Jul 1, 2020, 7:12 PM IST

ETV Bharat / state

ರಾಜಧಾನಿಯಲ್ಲಿ ಕೊರೊನಾ ಸ್ಫೋಟ.. ಬಸವನಗುಡಿ, ಮಲ್ಲೇಶ್ವರಂ ಸ್ವಯಂಪ್ರೇರಿತ ಲಾಕ್​ಡೌನ್​!

ಇಂದಿನಿಂದ ಜುಲೈ 6ರವರೆಗೆ ವಾಣಿಜ್ಯ-ವಹಿವಾಟು ಸ್ಥಗಿತಗೊಳ್ಳಲಿದೆ. ಮಲ್ಲೇಶ್ವರಂ ವ್ಯಾಪಾರಿಗಳ ಸಂಘದಿಂದ ಅಂಗಡಿ, ಶೋ ರೂಮ್‌, ಟ್ರೇಡರ್ಸ್ ಸೇರಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿವೆ..

Basavanagudi, Malleswaram
ರಾಜಧಾನಿಯಲ್ಲಿ ಕೊರೊನಾ ಸ್ಪೋಟ

ಬೆಂಗಳೂರು :ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರದ ಬಸವನಗುಡಿ ಹಾಗೂ ಮಲ್ಲೇಶ್ವರಂ ಏರಿಯಾಗಳನ್ನು ಸ್ವಯಂ ಪ್ರೇರಿತ ಲಾಕ್​ಡೌನ್​ಗೆ ಒಳಪಡಿಸಿದ್ದಾರೆ.

ಪ್ರತಿದಿನ ನಗರದಲ್ಲಿ 600-700 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದರಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಮಂಗಳವಾರ ಬಸವನಗುಡಿಯ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್​ ಮಾಡಿದ್ದರು. ಇದೀಗ ಸರ್ಕಾರ ಲಾಕ್​ಡೌನ್ ಘೋಷಿಸುವ ಮುನ್ನವೇ ಮಲ್ಲೇಶ್ವರಂನಲ್ಲಿ ಕೂಡ ಸ್ವಯಂಪ್ರೇರಿತ ಬಂದ್​​​ ಮಾಡಿದ್ದಾರೆ.

ಇಂದಿನಿಂದ ಜುಲೈ 6ರವರೆಗೆ ವಾಣಿಜ್ಯ-ವಹಿವಾಟು ಸ್ಥಗಿತಗೊಳ್ಳಲಿದೆ. ಮಲ್ಲೇಶ್ವರಂ ವ್ಯಾಪಾರಿಗಳ ಸಂಘದಿಂದ ಅಂಗಡಿ, ಶೋ ರೂಮ್‌, ಟ್ರೇಡರ್ಸ್ ಸೇರಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಮಾಡಿದ್ದಾರೆ.

ABOUT THE AUTHOR

...view details