ಬೆಂಗಳೂರು:ಎರಡು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿಕೊಟ್ಟರೂ ಪಕ್ಷದಲ್ಲಿ ಲಾಬಿ ನಿಂತಿಲ್ಲ. ಜಾಧವ್ ಹಾಗೂ ವಲ್ಯಾಪುರೆ ನಡುವೆ ಫೈಟ್ ಇನ್ನೂ ಮುಂದುವರೆದಿದೆ. ಟಿಕೆಟ್ಗಾಗಿ ಕೊನೆ ಕ್ಷಣದ ಕಸರತ್ತು ನಡೆಸಲಾಗುತ್ತಿದೆ.
ಇಂದು ಬೆಳಗ್ಗೆ ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಿದ ಉಮೇಶ್ ಜಾಧವ್, ಪುತ್ರನಿಗೆ ಟಿಕೆಟ್ ಕೊಡಿಸಿದರೆ ಕುಟುಂಬದಲ್ಲಿ ವೈಶಮ್ಯ ಆಗುವ ಭೀತಿ ಇದೆ. ಆದರೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಪುತ್ರ ಅವಿನಾಶ್ಗೆ ಟಿಕೆಟ್ ಸಿಕ್ಕರೆ ಉತ್ತಮ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ. ಮತ್ತೊಂದೆಡೆ ಸಹೋದರ ರಾಮಚಂದ್ರನ್ ಜಾಧವ್ ಕೂಡ ಇದ್ದಾರೆ. ಹೀಗಾಗಿ ಇಂದು ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಜಾಧವ್, ಚಿಂಚೋಳಿ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ. ಜನರ ಒಲವು ಯಾರಿಗೆ ಹೆಚ್ಚಿದೆಯೋ ಅವರಿಗೆ ಟಿಕೆಟ್ ನೀಡುವಂತೆ ಹೇಳಿದ್ದೇನೆ. ಸಹೋದರ ರಾಮಚಂದ್ರ ಜಾಧವ್ ಅಥವಾ ಪುತ್ರ ಅವಿನಾಶ್ ಜಾಧವ್ ಸೇರಿದಂತೆ ಯಾರಿಗೆ ಬೇಕಾದರೂ ಪಕ್ಷ ಟಿಕೆಟ್ ಕೊಡಬಹುದು. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಸಿಗಬೇಕು ಅಷ್ಟೇ ಎಂದರು.