ಬೆಂಗಳೂರು:ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಚಾಲಕನನ್ನು ಕೆ ಆರ್ ಪುರ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರ ಮೂಲದ ರಾಮ್ ಮೋಹನ್ ಬಂಧಿತ ಉಬರ್ ಕ್ಯಾಬ್ ಚಾಲಕ. ಟಿ.ಸಿ. ಪಾಳ್ಯದ ನಿವಾಸಿಯಾದ 25 ವರ್ಷದ ಯುವತಿ ಇತ್ತೀಚೆಗೆ ತನ್ನ ಗೆಳತಿಯರನ್ನು ಭೇಟಿ ಮಾಡಲು ಹೆಬ್ಬಾಳಕ್ಕೆ ಹೋಗಿದ್ದರು. ಹೆಬ್ಬಾಳದಿಂದ ತಮ್ಮ ಮನೆಗೆ ಬರಲು ಸಂಜೆ 6:30ರ ಸಮಯದಲ್ಲಿ ಉಬರ್ ಕ್ಯಾಬ್ ಬುಕ್ ಮಾಡಿದ್ದರು. ಕೆ.ಆರ್. ಪುರ ಮಾರ್ಗವಾಗಿ ಟಿಸಿ ಪಾಳ್ಯ ಗೇಟ್ನಲ್ಲಿ ಚಾಲಕ ಕ್ಯಾಬ್ನಲ್ಲಿಯೇ ಯುವತಿಯ ಕಾಲು ಮುಟ್ಟಿ ಟೀ ಷರ್ಟ್ ಒಳಗೆ ಕೈಹಾಕಲು ಯತ್ನಿಸಿದ್ದನಂತೆ. ನಂತರ ಸಂತ್ರಸ್ತೆ ಯುವತಿ ಮಾರ್ಗ ಮಧ್ಯೆಯೇ ಕ್ಯಾಬ್ ನಿಂದ ಇಳಿದು ಮನೆಗೆ ತೆರಳಿದ್ದಳು. ಫೆಬ್ರವರಿ 11ರಂದು ಘಟನೆ ಹಿನ್ನಲೆ ಕೆ.ಆರ್. ಪುರ ಪೊಲೀಸ್ ಠಾಣೆಗೆ ಚಾಲಕನ ದುರ್ವತನೆ ವಿರುದ್ಧ ಯುವತಿ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿ ಕ್ಯಾಬ್ ಚಾಲಕ ರಾಮ್ ಮೋಹನನ್ನನ್ನು ಫೆಬ್ರವರಿ 12 ರಂದು ಕೆ ಆರ್ ಪುರ ಪೊಲೀಸರು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿದ್ದರು. ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.