ಕರ್ನಾಟಕ

karnataka

ಆರ್ಟಿಕಲ್​ 370 ರದ್ದು : ಬಹಳ ವರ್ಷಗಳ ಕನಸು ನನಸಾಯ್ತು ಎಂದ ಬಿಎಸ್​​ವೈ

By

Published : Aug 5, 2019, 7:04 PM IST

ಸ್ವಾತಂತ್ರ್ಯ ನಂತರ ಜಮ್ಮು ಕಾಶ್ಮೀರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಂದು ಐತಿಹಾಸಿಕ ತೀರ್ಮಾನ ಮಾಡಿದ್ದು, ‌ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಆರ್ಟಿಕಲ್​ 370 ರದ್ದು : ಬಹಳ ವರ್ಷಗಳ ಕನಸು ನನಸಾಯ್ತು ಎಂದ ಬಿಎಸ್​​ವೈ

ಬೆಂಗಳೂರು: ಸ್ವಾತಂತ್ರ್ಯ ನಂತರ ಜಮ್ಮು ಕಾಶ್ಮೀರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಒಂದು ಐತಿಹಾಸಿಕ ತೀರ್ಮಾನ ಮಾಡಿದ್ದು, ‌ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಆರ್ಟಿಕಲ್​ 370 ರದ್ದು : ಬಹಳ ವರ್ಷಗಳ ಕನಸು ನನಸಾಯ್ತು ಎಂದ ಬಿಎಸ್​​ವೈ

ಬಹಳ ವರ್ಷಗಳ ಕನಸು ಈಗ ನನಸಾಯಿತು‌. ಪಂಡಿತ್ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಏಕ್ ದೇಶ್ ಮೇ ದೋ ಪ್ರಧಾನ್, ದೊ ವಿಧಾನ್, ದೊ ನಿಷಾನ್ ನಹೀ ಚಲೇಗಾ, ನಹೀ ಚಲೇಗಾ ಎಂದು ಹೋರಾಟ ಮಾಡಿ ಹುತಾತ್ಮರಾದರು. ಇದೀಗ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಬಿಎಸ್​​ವೈ ನೆನಪಿಸಿಕೊಂಡರು

ಕೇಂದ್ರದ ಈ ನಿರ್ಧಾರವನ್ನು ಪ್ರತಿಯೊಬ್ಬ ಭಾರತೀಯನು ಸ್ವಾಗತಿಸುತ್ತಾನೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ‌ ಹಾಗು ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ABOUT THE AUTHOR

...view details