ಕರ್ನಾಟಕ

karnataka

By

Published : Jul 23, 2020, 10:39 PM IST

ETV Bharat / state

ಆನೇಕಲ್​: ಚಂದಾಪುರ ಪುರಸಭೆ ಮಳಿಗೆಗಳ ಟೆಂಡರ್ ಹರಾಜು ಆರಂಭ

ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಪುರಸಭೆಯ 33 ಮಳಿಗೆಗಳ ಟೆಂಡರ್ ಬಹಿರಂಗ ಹರಾಜು ಆರಂಭಗೊಂಡಿದೆ. ಆದರೆ, ಲಾಭಕರವಲ್ಲದ ಅಂಗಡಿಗಳನ್ನು ಮಾತ್ರ ಹರಾಜಿಗೆ ಬಿಟ್ಟಿದ್ದಾರೆ ಎಂದು ಗ್ರಾಹಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

tender of the Chandrapur Municipal Stores has started
ಆನೇಕಲ್​: ಚಂದಾಪುರ ಪುರಸಭೆ ಮಳಿಗೆಗಳ ಟೆಂಡರ್ ಬಹಿರಂಗ ಹರಾಜು ಆರಂಭ

ಆನೇಕಲ್​:ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಪುರಸಭೆಯ 33 ಮಳಿಗೆಗಳ ಟೆಂಡರ್ ಬಹಿರಂಗ ಹರಾಜು ಆರಂಭಗೊಂಡಿದೆ.

ಆನೇಕಲ್​: ಚಂದಾಪುರ ಪುರಸಭೆ ಮಳಿಗೆಗಳ ಟೆಂಡರ್ ಬಹಿರಂಗ ಹರಾಜು ಆರಂಭ

ಪೊಲೀಸರಿಗೆ ಸಮರ್ಪಕ ಮಾಹಿತಿ ನೀಡದೆ ಪುರಸಭೆಯ ಆವರಣದಲ್ಲಿ ದೊಡ್ಡ ಪೆಂಡಾಲ್ ಹಾಕಿ, ಟೆಂಡರ್ ಬಹಿರಂಗ ಹರಾಜು ಮಾಡಲಾಗಿದೆ. ಕೆಲ ಅಂಗಡಿಗಳ ಹರಾಜನ್ನು ಬಚ್ಚಿಟ್ಟು, ಉಳಿದ ಅಂಗಡಿಗಳನ್ನಷ್ಟೇ ಹರಾಜಿಗೆ ಕರೆಯಲಾಗಿದೆ. ಇದರಿಂದ ಹರಾಜಿಗಾಗಿ ಡಿಡಿ ಕಟ್ಟಿದ್ದ ಗ್ರಾಹಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆ ಅಧ್ಯಕ್ಷರು ಹಾಗೂ ಪಿಡಿಒ ಇಲ್ಲದೆ ಕರೆದ ಬಹಿರಂಗ ಹರಾಜು ಉದ್ದೇಶಪೂರ್ವಕವಾಗಿದೆ. ಉಳ್ಳವರಿಗೆ ಆಯಕಟ್ಟು ಜಾಗದಲ್ಲಿರುವ ಅಂಗಡಿಗಳನ್ನು ನೀಡಿ, ಲಾಭಕರವಲ್ಲದ ಅಂಗಡಿಗಳನ್ನು ಮಾತ್ರ ಹರಾಜಿಗೆ ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details