ಕರ್ನಾಟಕ

karnataka

ಬೆಂಗಳೂರು: 1900 ಕ್ಕೂ ಹೆಚ್ಚು ಸ್ಥಳಗಳಲ್ಲಿ 'ಸ್ವಚ್ಛತಾ ಹೀ ಸೇವಾ ಶ್ರಮದಾನ', 2.5 ಲಕ್ಷಕ್ಕೂ ಹೆಚ್ಚು ಜನ ಭಾಗಿ

By ETV Bharat Karnataka Team

Published : Oct 1, 2023, 7:05 PM IST

Updated : Oct 1, 2023, 7:50 PM IST

ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸ್ಥಳೀಯ ಶಾಸಕರು, ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್, ಎಲ್ಲಾ ವಲಯ ಜಂಟಿ ಆಯುಕ್ತರು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

swachata campaign  conducted at 1260 places
ಬೆಂಗಳೂರಲ್ಲಿ 1260ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 154ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1900 ಕ್ಕೂ ಹೆಚ್ಚು ಸ್ಥಳಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಇಂದು ಸ್ವಚ್ಛತಾ ಹೀ ಸೇವಾ ಶ್ರಮದಾನ (ಒಂದು ಗಂಟೆ ಸ್ವಚ್ಛತೆಗಾಗಿ ಶ್ರಮದಾನ) ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

ಸ್ವಚ್ಛ ಸರ್ವೇಕ್ಷಣ್-2023 ಅನುಸರಣೆಗಾಗಿ ಬಿಬಿಎಂಪಿಯ ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಎರಡು ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಎನ್‌ಜಿಒ, ಎಸ್‌ಎಚ್‌ಜಿ, ಎನ್‌ಎಸ್‌ಎಸ್ ಅಥವಾ ಎನ್‌ಸಿಸಿ ಕೆಡೆಟ್‌ಗಳು, ಆರ್‌ಡಬ್ಲ್ಯುಎ, ಸ್ವಯಂ ಸೇವಕರು, ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿದರು.

ಅದರಲ್ಲೂ, ನಗರದಾದ್ಯಂತ ಜಲಮೂಲಗಳು, ರೈಲ್ವೆ ಹಳಿಗಳು, ರಸ್ತೆ ಬದಿ, ಸೇತುವೆಯ ಕೆಳಗೆ, ಮೇಲ್ಸೇತುವೆ ಕೆಳಗೆ, ಕೊಳೆಗೇರಿ ಪ್ರದೇಶಗಳು, ಮಾರುಕಟ್ಟೆ ಸ್ಥಳಗಳು, ಆರಾಧನೆ ಸ್ಥಳಗಳು, ಪ್ರವಾಸಿ ಸ್ಥಳ, ಬಸ್ ನಿಲ್ದಾಣಗಳು, ಶಾಲಾ, ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶ, ಆರೋಗ್ಯ ಸಂಸ್ಥೆಗಳ ಸ್ಥಳಗಳಲ್ಲಿ ತ್ಯಾಜ್ಯವನ್ನು ನಿರ್ಮೂಲನೆ ಮಾಡಲಾಯಿತು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ, ಬೆಂಗಳೂರು ನಗರಕ್ಕಿರುವ 'ಉದ್ಯಾನ ನಗರಿ' ಎಂಬ ಖ್ಯಾತಿಯನ್ನು ಮರಳಿ ತರಲು ಸ್ವಚ್ಛ, ನೈರ್ಮಲ್ಯ ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಹಸಿರನ್ನು ಕಾಪಾಡಿಕೊಳ್ಳುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

ಅಭಿಯಾನದ ಮಾಹಿತಿ ವೆಬ್‌ಸೈಟ್‌ನಲ್ಲಿ: ಬಿಬಿಎಂಪಿ ವ್ಯಾಪ್ತಿಯ ಒಟ್ಠಾರೆ 1260 ಸ್ಥಳಗಳ - ಪ್ರತಿ ವಾರ್ಡ್​ನಲ್ಲಿ ಜರುಗುವ ಅಭಿಯಾನದ ಸ್ಥಳಗಳನ್ನು ಸ್ವಚ್ಛತಾ-ಹೀ-ಸೇವಾ (swachhatahiseva.com) ವೆಬ್ ಪೋರ್ಟಲ್‌ ಹಾಗೂ ಪಾಲಿಕೆಯ ವೆಬ್ ಸೈಟ್(bbmp.gov.in) ನಲ್ಲಿ ನಮೂದಿಸಿರುವುದು ವಿಶೇಷವಾಗಿದೆ.

ಎಲ್ಲೆಲ್ಲಿ ಸ್ವಚ್ಛತಾ ಶ್ರಮದಾನ?

• ಆಡಳಿತಗಾರ ರಾಕೇಶ್ ಸಿಂಗ್ ನೇತೃತ್ವದಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ಸೇರಿದಂತೆ ಇನ್ನಿತರರು ಕೋರಮಂಗಲದ 80 ರಸ್ತೆಯ ಪಾಸ್ ಪೋರ್ಟ್ ಕಛೇರಿ ಬಳಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

• ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ನೇತೃತ್ವದಲ್ಲಿ, ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಹೀಮ್ ಮೊಮಿನ್ ಸೇರಿದಂತೆ ಇನ್ನಿತರರು ಯಲಹಂಹ ಹೋಲ್ಡ್ ಟೌನ್, ಸರ್ಕಾರಿ ಆಸ್ಪತ್ರೆ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಎಕೆ ಕಾಲೋನಿ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

• ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್ ನೇತೃತ್ವದಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಟನ್ ಪೇಟೆ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನೆಡೆಯಿತು.

• ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ನೇತೃತ್ವದಲ್ಲಿ ಉಚ್ಛ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಜರುಗಿತು. ನ್ಯಾಯಾಲಯದ ರಿಜಿಸ್ಟರ್ ಗಳು, ಕಬ್ಬನ್ ಪಾರ್ಕ್‌ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ಇದನ್ನೂಓದಿ:ತೆಲಂಗಾಣದಲ್ಲಿ ₹13,500 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ: ಹೈದರಾಬಾದ್​-ರಾಯಚೂರು ರೈಲಿಗೂ ಚಾಲನೆ

Last Updated : Oct 1, 2023, 7:50 PM IST

ABOUT THE AUTHOR

...view details