ಕರ್ನಾಟಕ

karnataka

By

Published : Mar 11, 2020, 5:57 PM IST

ETV Bharat / state

ಶಾಮನೂರು ಕಾಲಿಗೆ ಬಿದ್ದು ನಮಸ್ಕರಿಸಿದ ಕೆಪಿಸಿಸಿ ಸಾರಥಿ ಡಿಕೆಶಿ

ಕೆಪಿಸಿಸಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್ ಅವರು ಶಾಮನೂರು ಶಿವಶಂಕರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸಹ ಡಿ.ಕೆ. ಶಿವಕುಮಾರ್ ಗೆ ಶುಭ ಕೋರಿದರು.

shamanur-shivashankarappa-well-wishes-to-dks
ಶಾಮನೂರು ಕಾಲಿಗೆ ಬಿದ್ದು ನಮಸ್ಕರಿಸಿದ ಕೆಪಿಸಿಸಿ ಸಾರಥಿ ಡಿಕೆಶಿ

ಬೆಂಗಳೂರು:ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್​ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕಾಲಿಗೆ‌ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.

ಸದನದ ಕಲಾಪ ಮುಂದೂಡಿದ ಸಂದರ್ಭದಲ್ಲಿ ವಿಧಾನಸಭಾ ಮೊಗಸಾಲೆಗೆ ಬಂದ ಡಿಕೆಶಿ, ಶಾಮನೂರು ಶಿವಶಂಕರಪ್ಪ ಅವರನ್ನು ಕಂಡ ಕೂಡಲೇ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ. ಬಿ. ಪಾಟೀಲ್​ ಸೇರಿದಂತೆ ವಿವಿಧ ಹಿರಿಯ ನಾಯಕರು ಡಿಕೆಶಿಗೆ ಶುಭ ಕೋರಿದ್ರು.

ಶಾಮನೂರು ಕಾಲಿಗೆ ಬಿದ್ದು ನಮಸ್ಕರಿಸಿದ ಕೆಪಿಸಿಸಿ ಸಾರಥಿ ಡಿಕೆಶಿ

ಟ್ವೀಟ್​ ಮೂಲಕ ಶುಭ ಕೋರಿದ ಸಿದ್ದರಾಮಯ್ಯ:

ನೂತನವಾಗಿ ಆಯ್ಕೆಯಾಗಿರು ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರುಗಳಿಗೆ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮೂಲಕ ಶಭಾಶಯ ಕೋರಿದ್ದಾರೆ.

ಗಮನ ಸೆಳೆದ ರೇಣುಕಾಚಾರ್ಯ:

ಪ್ರತಿಪಕ್ಷದ ಮೊಗಸಾಲೆಯಲ್ಲಿ ಕಾಣಿಸಿಕೊಂಡ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರು ಡಿ.ಕೆ. ಶಿವಕುಮಾರ್ ಗೆ ಶುಭ ಕೋರಿದರು. ಹೊನ್ನಾಳಿಯ‌ ಹಿರೇಕಲ್ಮಠಕ್ಕೆ ಬಂದಾಗಲೇ ನಿಮಗೆ‌ ಶುಭ ಸುದ್ದಿ ಬರಲಿದೆ ಎಂದು ಹೇಳಿದ್ದೆ. ಅದು ನಿಜವಾಗಿದೆ ಇಂದು ನಿಮಗೆ ಶುಭ ಸುದ್ದಿ ಬಂದಿದೆ ಎನ್ನುತ್ತಾ ಶುಭಾಶಯ ತಿಳಿಸಿದರು.

For All Latest Updates

ABOUT THE AUTHOR

...view details